ಎರಡು–ಮೂರು ದಿನಗಳ ಹಿಂದೆ ಖರೀದಿಸಿದ ಡಿಸೇಲ್ ಖಾಲಿಯಾಗಿರುವುದರಿಂದ, ಕೆಲವು ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಹಗಲಿನ ವೇಳೆ ಟ್ಯಾಂಕರ್ಗಳಿಗೆ ನಗರ ಪ್ರವೇಶ ಇಲ್ಲದಿರುವುದರಿಂದ, ಅವು ಹೊಲವಲಯದಲ್ಲಿವೆ. ರಾತ್ರಿ ವೇಳೆ ತೈಲ ಪೂರೈಕೆ ಮಾಡಲಿವೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿರುವುದರಿಂದ ಬಂಕ್ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಬಂಕ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುವುದಿಲ್ಲ. ಸರ್ಕಾರವನ್ನೇ ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.