ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದ ವೈದ್ಯರು ಮತ್ತು ಸಿಬ್ಬಂದಿ ನಡವಳಿಕೆ ಕುರಿತು ಜಿಲ್ಲಾ ದಂಡಾಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದರು. ಕಳೆದ ಮಾರ್ಚ್ 19 ರಂದು ಘಟನೆ ನಡೆದಿದ್ದು, ಐದು ದಿನಗಳವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಆ ದಿನಗಳಲ್ಲಿ ನೀವು ಮಾಡಿದ ಕೆಲಸ, ನೀಡಿದ ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿದ್ದರೆ ಆ ಕುರಿತು ನಿಖರ ಮಾಹಿತಿ ಒದಗಿಸಿ, ಮಾಹಿತಿ ಕುರಿತು ಗೊಂದಲವಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಹೇಳಿಕೆ ನೀಡಿ ಎಂದು ಸೂಚಿಸಿದರು.