ಸಮೀಕ್ಷೆ ಸಾಮಾನ್ಯ: ‘ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ನಡೆಯುವುದು ಸಾಮಾನ್ಯ. ನಿಜವಾಗಿಯೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದರೆ, ಅದನ್ನು ದಾಖಲೆ ಸಮೇತ ನೀಡಲಿ. ಅದು ಬಿಟ್ಟು ರಾಜಕೀಯ ಕಾರಣಕ್ಕಾಗಿ, ಕಾಂಗ್ರೆಸ್ನವರು ತಳಬುಡವಿಲ್ಲದ ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಇಷ್ಟಕ್ಕೂ ಯಾರದ್ದಾದರೂ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಅದಕ್ಕೆ ಅಧಿಕಾರಿಗಳು ಹೊಣೆಯೇ ಹೊರತು ನಮ್ಮ ಪಕ್ಷವಲ್ಲ’ ಎಂದು ಹೇಳಿದರು.