ಜಯಂತಿ ಅಂಗವಾಗಿ ನಗರದ ಮಹಾವೀರ ಗಲ್ಲಿ, ಕಂಚಗಾರ ಗಲ್ಲಿ, ಮರಾಠ ಗಲ್ಲಿ, ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ಇರುವ ಜೈನ ಮಂದಿರಗಳಲ್ಲಿ ಬೆಳಿಗ್ಗೆ 6ಕ್ಕೆ ಪಂಚಾಮೃತ ಪೂಜೆ ಹಾಗೂ ಮಹಾವೀರ ತೀರ್ಥಂಕರರ ತೊಟ್ಟಿಲೋತ್ಸವ ಜರುಗಿತು. ಕಂಚಗಾರ ಗಲ್ಲಿಯಲ್ಲಿರುವ ಜೈನ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆಯು ಸುತ್ತಮುತ್ತಲಿನ ಪ್ರದೇಶಗಳ ಪ್ರಮುಖ ಬೀದಿಗಳಲ್ಲಿ ಸಾಗಿತು.