ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ದಲಿತರನ್ನು ಸಿ.ಎಂ, ಮುಸ್ಲಿಮರನ್ನು ಡಿಸಿಎಂ ಮಾಡಿ: ಪರಮೇಶಪ್ಪ ಹಲಗೇರಿ

Published 15 ಮೇ 2023, 16:15 IST
Last Updated 15 ಮೇ 2023, 16:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಹುಮತ ಪಡೆದಿರುವ ಕಾಂಗ್ರೆಸ್‌ ಪರಿಶಿಷ್ಟ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ, ಮುಸ್ಲಿಮರೊಬ್ಬರನ್ನು  ಉಪಮುಖ್ಯಮಂತ್ರಿ ಮಾಡಬೇಕು’ ಎಂದು ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನಾ ಟ್ರಸ್ಟ್ ರಾಜ್ಯ ಘಟಕದ ಅಧ್ಯಕ್ಷ ಪರಮೇಶಪ್ಪ ಹಲಗೇರಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೂತನ ಸರ್ಕಾರವು ಎಲ್ಲಾ ಇಲಾಖೆಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಜಾತಿವಾರು ಗಣತಿ ನಡೆಸಿ ಜನಸಂಖ್ಯೆ ಆಧಾರದಲ್ಲಿ ಸೌಲಭ್ಯಗಳನ್ನು ನೀಡಬೇಕು. ಖಾಸಗೀಕರಣ ನಿಲ್ಲಿಸಿ, ಸರ್ಕಾರದ ಅಧೀನದಲ್ಲಿಯೇ ಆಡಳಿತ ನಡೆಸಬೇಕು’ ಎಂದು ಒತ್ತಾಯಿಸಿದರು.

‘ದೇವಸ್ಥಾನ ಮತ್ತು ಮಠಗಳಿಗೆ ಸರ್ಕಾರ ಅನುದಾನ ನೀಡುವುದನ್ನು ನಿಲ್ಲಿಸಬೇಕು. ಸರ್ವರಿಗೂ ಸಮಪಾಲು, ಸಮಬಾಳು, ಸಮಾನ ಹಕ್ಕು ಹಾಗೂ ಪಕ್ಷಾಂತರ ನಿಷೇಧ ಕಾನೂನು ತಕ್ಷಣ ಜಾರಿಯಾಗಬೇಕು. ಶಿಕ್ಷಣ ವ್ಯಾಪಾರೀಕರಣ ನಿಯಂತ್ರಿಸಬೇಕು’ ಎಂದರು.

ಟ್ರಸ್ಟ್‌ನ ಸದಾನಂದ ತೇರದಾಳ, ಶಿವಾನಂದ ಜಿ.ಜಿ., ವಿಜಯಕುಮಾರ ಹಿರೇಮಠ, ಡಾ. ಎಂ. ದಿಕ್ಷಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT