ವೃತ್ತ ಪತ್ರಿಕೆಗಳ ಮಾರಾಟ ಸಂಘ: ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರು ಎದೆಗುಂದದೆ ಮನೆಮೆನೆ ಪತ್ರಿಕೆ ವಿತರಿಸಿದ್ದಾರೆ. ಮಳೆ, ಗಾಳಿ, ಚಳಿ ಎನ್ನದೆ ವರ್ಷ ಪರ್ಯಂತ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಇವರ ಬದುಕಿಗೆ ಯಾವುದೇ ಭದ್ರತೆ ಇರದ ಕಾರಣ, ಅತಂತ್ರದಿಂದ ದಿನ ದೂಡುವಂತಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ₹2 ಕೋಟಿ ಮೀಸಲಿಟ್ಟಿದ್ದರು. ಆದರೆ, ಅದು ಬಳಕೆಯಾಗದೆ, ಮರಳಿ ಸರ್ಕಾರಕ್ಕೆ ಹೋಗಿದೆ. ಮುಂದಿನ ಬಜೆಟ್ನಲ್ಲಿ ಪತ್ರಿಕಾ ವಿತರಕರ ಹಿತದೃಷ್ಟಿಯಿಂದ ಪತ್ರಿಕಾ ವಿತರಕರ ಕಲ್ಯಾಣ ನಿಧಿ ಸ್ಥಾಪಿಸಿ, ಪ್ರತಿ ಜಿಲ್ಲೆಗೆ ₹1 ಕೋಟಿ ಮೀಸಲಿಡಬೇಕು. ಅಲ್ಲದೆ, ಪತ್ರಿಕಾ ವಿತರಕರ ಪ್ರಾಧಿಕಾರ ರಚಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.