ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಣಿ ಗುತ್ತಿಗೆದಾರರಿಂದ ಪಡೆದ ಕಡ್ಡಾಯ ದೇಣಿಗೆಯನ್ನು ಗಣಿ ಬಾಧಿತ ಪ್ರದೇಶ ಹಾಗೂ ಜನರ ಅಭಿವೃದ್ಧಿ ಹಾಗೂ ಪುನರ್ವಸತಿ ಬಳಕೆಯಾಗಬೇಕು. ಆದರೆ ಹಾಗೆ ಆಗುತ್ತಿಲ್ಲ. ಈ ಹಣವನ್ನು ರಾಜ್ಯ ಸರ್ಕಾರ ಬೇರೆ ಖರ್ಚಿಗೆ ಬಳಸುತ್ತಿದೆ. ಹೀಗಿರುವಾಗ ಕೇಂದ್ರವು ರಾಜ್ಯದ ಅಧಿಕಾರವನ್ನು ಹಿಂಪಡೆದರೆ ತಪ್ಪೇನು?’ ಎಂದು ಪ್ರಶ್ನಿಸಿದ್ದಾರೆ.