‘ಆಡಿಯೊ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂಬ ಆರೋಪ ಹಾಸ್ಯಾಸ್ಪದ. ಈ ಕುರಿತು ಬಿಜೆಪಿಯ ಆಂತರಿಕ ಸಮಿತಿ ನಡೆಸಿರುವ ತನಿಖೆಯಲ್ಲಿ ಸಚಿವರಾದ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಶಿಷ್ಯರೇ ಆಡಿಯೊ ಬಹಿರಂಗಕ್ಕೆ ಕಾರಣರಾಗಿದ್ದಾರೆಂದು ತಿಳಿದು ಬಂದಿದೆ. ಅದಕ್ಕಾಗಿ ಶೆಟ್ಟರ್, ಸಿದ್ದರಾಮಯ್ಯ ವಿರುದ್ಧ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಆ ಪಕ್ಷದೊಳಗೆ ಹುನ್ನಾರ ನಡೆಯುತ್ತಿರುವುದಕ್ಕೆ ಈ ಆಡಿಯೊ ಸಾಕ್ಷಿಯಾಗಿದೆ’ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.