<p><strong>ಧಾರವಾಡ</strong>: ಕಿತ್ತೂರು ಮಾರ್ಗವಾಗಿ ಬೆಳಗಾವಿ ಸಂಪರ್ಕಿಸುವ ರೈಲು ಯೋಜನೆಯ ಭೂಸ್ವಾಧೀನಕ್ಕೆ ₹150ಕೋಟಿ ಅನುದಾನ, ಬೈಪಾಸ್ನ ಷಟ್ಪಥ ರಸ್ತೆಗೆ ₹1,200 ಘೋಷಿಸುವ ಮೂಲಕ ಸಂಪರ್ಕಕ್ಕೆ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.</p>.<p>ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾತೃ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನಿರ್ದಿಷ್ಟ ಅನುದಾನ ಘೋಷಿಸದಿರುವುದೂ ಕನ್ನಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. </p>.<p>ಹೆಚ್ಚಿನ ಅನುದಾನವನ್ನು ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೋರಿತ್ತು. ಜ.31ಅನ್ನು ವಿಶ್ವ ಕವಿ ದಿನವನ್ನಾಗಿ ಘೋಷಿಸುವಂತೆಯೂ ಕೇಳಿತ್ತು. ಇತರ ಟ್ರಸ್ಟ್ಗಳೂ ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿದ್ದವು. ಆದರೆ ಅಂಥ ಯಾವುದೇ ಘೋಷಣೆಗಳು ಮಂಡನೆಯಾಗಿಲ್ಲ. ಮಠಗಳಿಗೆ ಅನುದಾನ ಘೋಷಣೆಯಾಗಿದ್ದರೂ, ಈ ಹಿಂದೆ ಘೋಷಣೆಯಾದ ಪ್ರಮಾಣದಲ್ಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.</p>.<p>‘ಇತ್ತೀಚೆಗೆ ಭೂಮಿಪೂಜೆ ನೆರವೇರಿದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ಗೆ ಅನುದಾನ ನೀಡಲಾಗುವುದು ಎಂದಷ್ಟೇ ಹೇಳಿರುವುದರಲ್ಲಿ ಸ್ಪಷ್ಟತೆ ಇಲ್ಲ. ಈಗಾಗಲೇ ನಿರ್ಮಾಣಗೊಂಡಿರುವ ಸ್ವಯಂಚಾಲಿತ ವಾಹನ ಚಾಲನೆಯ ಪರೀಕ್ಷಾ ಟ್ರ್ಯಾಕ್ ನಿರ್ಮಿಸಲಾಗಿದೆ ಎಂದು ಬಜೆಟ್ ಪ್ರತಿಯಲ್ಲಿ ಹೇಳಲಾಗಿದೆ. ಈ ಹಿಂದೆ ಆಗಿರುವುದನ್ನೇ ಹೇಳಲಾಗಿದೆ’ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.</p>.<p>ಹಿರಿಯ ವಕೀಲ ಪಿ.ಎಚ್.ನೀರಲಕೇರಿ ಪ್ರತಿಕ್ರಿಯಿಸಿ, ‘ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಅಗತ್ಯವಿರುವ ಹೊರ ವರ್ತುಲ ರಸ್ತೆಯ ಪ್ರಸ್ತಾಪವಿಲ್ಲ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗಿಗೂ ಮನ್ನಣೆ ದೊರೆತಿಲ್ಲ. ಬೆಣ್ಣೆ ಹಳ್ಳಿ, ತುಪ್ಪರಿ ಹಳ್ಳಗಳ ಪ್ರವಾಹಕ್ಕೆ ಶಾಶ್ವತ ಪರಿಹಾರವನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.</p>.<p>ಒಂದು ಜಿಲ್ಲೆ ಒಂದು ಬೆಳೆಯಡಿ ಆಯ್ಕೆಯಾಗಿರುವ ಮಾವು ಮಾರುಕಟ್ಟೆ ಸ್ಥಾಪನೆ ಹಾಗೂ ಶೇಖರಣೆ ಮತ್ತು ಮೌಲ್ಯವರ್ಧನೆಗೆ ಅನುದಾನ ನೀಡಬೇಕಿತ್ತು ಎಂಬ ಅಭಿಪ್ರಾಯ ಮಾವು ಬೆಳಗಾರರಿಂದ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಕಿತ್ತೂರು ಮಾರ್ಗವಾಗಿ ಬೆಳಗಾವಿ ಸಂಪರ್ಕಿಸುವ ರೈಲು ಯೋಜನೆಯ ಭೂಸ್ವಾಧೀನಕ್ಕೆ ₹150ಕೋಟಿ ಅನುದಾನ, ಬೈಪಾಸ್ನ ಷಟ್ಪಥ ರಸ್ತೆಗೆ ₹1,200 ಘೋಷಿಸುವ ಮೂಲಕ ಸಂಪರ್ಕಕ್ಕೆ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.</p>.<p>ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾತೃ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನಿರ್ದಿಷ್ಟ ಅನುದಾನ ಘೋಷಿಸದಿರುವುದೂ ಕನ್ನಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. </p>.<p>ಹೆಚ್ಚಿನ ಅನುದಾನವನ್ನು ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೋರಿತ್ತು. ಜ.31ಅನ್ನು ವಿಶ್ವ ಕವಿ ದಿನವನ್ನಾಗಿ ಘೋಷಿಸುವಂತೆಯೂ ಕೇಳಿತ್ತು. ಇತರ ಟ್ರಸ್ಟ್ಗಳೂ ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿದ್ದವು. ಆದರೆ ಅಂಥ ಯಾವುದೇ ಘೋಷಣೆಗಳು ಮಂಡನೆಯಾಗಿಲ್ಲ. ಮಠಗಳಿಗೆ ಅನುದಾನ ಘೋಷಣೆಯಾಗಿದ್ದರೂ, ಈ ಹಿಂದೆ ಘೋಷಣೆಯಾದ ಪ್ರಮಾಣದಲ್ಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.</p>.<p>‘ಇತ್ತೀಚೆಗೆ ಭೂಮಿಪೂಜೆ ನೆರವೇರಿದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ಗೆ ಅನುದಾನ ನೀಡಲಾಗುವುದು ಎಂದಷ್ಟೇ ಹೇಳಿರುವುದರಲ್ಲಿ ಸ್ಪಷ್ಟತೆ ಇಲ್ಲ. ಈಗಾಗಲೇ ನಿರ್ಮಾಣಗೊಂಡಿರುವ ಸ್ವಯಂಚಾಲಿತ ವಾಹನ ಚಾಲನೆಯ ಪರೀಕ್ಷಾ ಟ್ರ್ಯಾಕ್ ನಿರ್ಮಿಸಲಾಗಿದೆ ಎಂದು ಬಜೆಟ್ ಪ್ರತಿಯಲ್ಲಿ ಹೇಳಲಾಗಿದೆ. ಈ ಹಿಂದೆ ಆಗಿರುವುದನ್ನೇ ಹೇಳಲಾಗಿದೆ’ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.</p>.<p>ಹಿರಿಯ ವಕೀಲ ಪಿ.ಎಚ್.ನೀರಲಕೇರಿ ಪ್ರತಿಕ್ರಿಯಿಸಿ, ‘ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಅಗತ್ಯವಿರುವ ಹೊರ ವರ್ತುಲ ರಸ್ತೆಯ ಪ್ರಸ್ತಾಪವಿಲ್ಲ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗಿಗೂ ಮನ್ನಣೆ ದೊರೆತಿಲ್ಲ. ಬೆಣ್ಣೆ ಹಳ್ಳಿ, ತುಪ್ಪರಿ ಹಳ್ಳಗಳ ಪ್ರವಾಹಕ್ಕೆ ಶಾಶ್ವತ ಪರಿಹಾರವನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.</p>.<p>ಒಂದು ಜಿಲ್ಲೆ ಒಂದು ಬೆಳೆಯಡಿ ಆಯ್ಕೆಯಾಗಿರುವ ಮಾವು ಮಾರುಕಟ್ಟೆ ಸ್ಥಾಪನೆ ಹಾಗೂ ಶೇಖರಣೆ ಮತ್ತು ಮೌಲ್ಯವರ್ಧನೆಗೆ ಅನುದಾನ ನೀಡಬೇಕಿತ್ತು ಎಂಬ ಅಭಿಪ್ರಾಯ ಮಾವು ಬೆಳಗಾರರಿಂದ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>