ಇದೇ ಸಂದರ್ಭದಲ್ಲಿ 2018–19, 2020–21, 2021–22ನೇ ಸಾಲಿನ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ‘ಇಷ್ಟು ವರ್ಷಗಳ ಕಾಲ ಯಾವುದೇ ಸರ್ಕಾರಗಳು ತಿರುಗಿ ನೋಡದೇ ಉಳಿದಿದ್ದ ರೈತ, ಕೂಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ. ಯಾವುದೇ ಯೋಜನೆಯ ಫಲಾನುಭವಿ ಗಳಾಗಿದ್ದರೂ ಅವರಿಗೆ ವಿದ್ಯಾನಿಧಿ ಸಿಗಲಿದೆ. ಹೀಗಾಗಿ 47 ಸಾವಿರ ರೈತ ಕೂಲಿಕಾರ್ಮಿಕರ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ. ಇದು ನನಗೆ ಹಂಡೆ ಹಾಲು ಕುಡಿದಷ್ಟು ಸಂತೋಷ ವನ್ನುಂಟು ಮಾಡಿದೆ’ ಎಂದರು.