‘ಕಳೆದ ವರ್ಷದ ಬಜೆಟ್ನಲ್ಲಿ ಘೋಷಿಸಿದ ಹಾಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕು. ಎಸ್.ಸಿ, ಎಸ್.ಟಿ, ಒಬಿಸಿ ಹಾಸ್ಟೆಲ್ಗಳ ಸ್ಥಿತಿ ಶೋಚನೀಯವಾಗಿದ್ದು, ತಕ್ಷಣ ಹಾಸ್ಟೆಲ್ಗಳನ್ನು ಮೇಲ್ದರ್ಜೆಗೇರಿಸಲು ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ಎಬಿವಿಪಿ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಜಗದೀಶ ಮಾನೆ, ಪವನ ಕರಿಕಟ್ಟಿ, ಮಂಜುಳಾ ಕುಂಬಾರ, ಹನುಂತ ಬಗಲಿ, ಶಿವಾನಂದ ಘಂಟಿಕರ್, ಸದ್ದಾಂ ಹುಸೇನ್, ಬಸವರಾಜ, ಶಶಿಕುಮಾರ, ಸುಕನ್ಯಾ ಸಿಂಗಟಾಲೂರ ಇದ್ದರು.