ನಗರದ ಅಕ್ಕಿಹೊಂಡದ ಕನ್ನಡ ಸರ್ಕಾರಿ ಶಾಲೆಯ ಹಿಂದೆ ಬುಧವಾರ ಇಸ್ಪೀಟ್ ಆಡುತ್ತಿದ್ದ ನಾಲ್ವರನ್ನು ಘಂಟಿಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಕೆ. ನಗರದ ಚಾಂದಸಾಬ ಅಲಿಯಾಸ್ ಚಾಂದ, ದೇಸಾಯಿ ಓಣೆಯ ನಾಗರಾಜ, ಶಿಂಪಿ ಗಲ್ಲಿಯ ವಿಜಯಕುಮಾರ ಅಲಿಯಾಸ್ ವಿಜಯ, ಈಶ್ವರನಗರದ ಹುಸೇನಸಾಬ ಅಲಿಯಾಸ್ ಹುಸೇನ ಬಂಧಿತರು. ಆರೋಪಿಗಳಿಂದ ₹1,970 ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.