<p><strong>ಹುಬ್ಬಳ್ಳಿ: ‘</strong>2047ರ ವೇಳೆಗೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಆಗಲಿದ್ದು, ದೇಶದ ಈ ಬೆಳೆವಣಿಗೆಯಲ್ಲಿ ಸಾರ್ವಜನಿಕರು ಸಹ ಭಾಗಿಯಾಗಲು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆಯಾಗಿದೆ’ ಎಂದು ಕೆನರಾ ರೊಬೆಕೊ–ಮ್ಯೂಚುಯಲ್ ಫಂಡ್ಸ್ ಸಂಸ್ಥೆಯ ವಲಯ ಮಾರಾಟ ವಿಭಾಗದ ಮುಖ್ಯಸ್ಥ ಸದಾನಂದ ಪ್ಯಾಟಿ ಹೇಳಿದರು.</p>.<p>ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ‘ಪ್ರಜಾವಾಣಿ’ ಸಹಯೋಗದಲ್ಲಿ ಕೆನರಾ ರೊಬೆಕೊ–ಮ್ಯೂಚುಯಲ್ ಫಂಡ್ಸ್ ಸಂಸ್ಥೆ ಹಾಗೂ ರೋಟರಿ ಹುಬ್ಬಳ್ಳಿ ಮಿಡ್ ಟೌನ್ ಶುಕ್ರವಾರ ಆಯೋಜಿಸಿದ್ದ ‘#ಸ್ಮಾರ್ಟ್ ಟುಮಾರೊ–ಹೂಡಿಕೆದಾರರ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು.</p>.<p>‘ದೇಶದ ಪ್ರಸ್ತುತ ಆರ್ಥಿಕತೆ 4.2 ಟ್ರಿಲಿಯನ್ ಡಾಲರ್ ಆಗಿದ್ದು, ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಜಿಡಿಪಿ ಶೇ 7.5ರಷ್ಟಿದೆ. ಜನರ ತಲಾದಾಯ ಸದ್ಯ ₹2 ಲಕ್ಷ ಇದ್ದು, 2047ರ ವೇಳೆಗೆ ₹16 ಲಕ್ಷಕ್ಕೂ ಅಧಿಕ ಆಗಲಿದೆ. ಜಿಎಸ್ಟಿ ಪರಿಷ್ಕರಣೆಯಿಂದ ಜನರಲ್ಲಿ ಹಣ ಉಳಿತಾಯವಾಗುತ್ತಿದೆ. ಹೂಡಿಕೆ ಮಾಡಲು ಇದು ಸದಾವಕಾಶ’ ಎಂದು ಅಭಿಪ್ರಾಯಪಟ್ಟರು. </p>.<p>‘ಜನರ ವೇತನ ಪ್ರಮಾಣ ಏರಿಕೆಯಾಗುತ್ತಿದ್ದು, ಇದರಲ್ಲಿ ಸಾಧ್ಯವಾದಷ್ಟು ಉಳಿಸಬೇಕು. ಉಳಿಕೆ ಹಣದಿಂದ ಉತ್ತಮ ಲಾಭ ಪಡೆಯಲು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿನ ಯೋಜನೆಗಳ ಮೂಲಕ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಬಡ್ಡಿ ಪಡೆದು, ಆ ಬಡ್ಡಿಯ ಮೇಲೆ ಇನ್ನಷ್ಟು ಬಡ್ಡಿ ಪಡೆಯುವ ಅವಕಾಶವಿದೆ’ ಎಂದು ವಿವರಿಸಿದರು. </p>.<p>‘ಬ್ಯಾಂಕ್ನಲ್ಲಿ ಹಣವಿಟ್ಟರೆ ಸಿಗುವ ಬಡ್ಡಿದರ ಕಡಿಮೆ. ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಲಾಭ ಪಡೆಯಲು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಎಲ್ಲ ರೀತಿಯಿಂದಲೂ ಉತ್ತಮವಾಗಿರುವ ಮ್ಯೂಚುಯಲ್ ಫಂಡ್ನತ್ತ ಅನೇಕ ಜನರು ಒಲವು ತೋರುತ್ತಿದ್ದಾರೆ’ ಎಂದರು.</p>.<p>‘ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕಾದರೆ ಆರ್ಥಿಕ ಶಿಸ್ತು ಪಾಲಿಸಬೇಕು. ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ಪರಿಣತರ ನೆರವು ಪಡೆಯಬೇಕು. ಯುವಜನರು ಈಗಲೇ ಹೂಡಿಕೆ ಮಾಡಿದರೆ ಕಂತುಗಳಲ್ಲಿ ಕಡಿಮೆ ಮೊತ್ತ ಪಾವತಿಸುತ್ತ, ತಾವು ಅಂದುಕೊಂಡಷ್ಟು ಮೊತ್ತವನ್ನು ನಿಗದಿತ ಸಮಯದಲ್ಲಿ ಗಳಿಸಬಹುದು’ ಎಂದು ವಿಶ್ಲೇಷಿಸಿದರು.</p>.<p>ನಂತರ ನಡೆದ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಒಂದೇ ಕಡೆಗೆ ಹೆಚ್ಚು ಹೂಡಿಕೆ ಮಾಡಬಾರದು. ಆಸ್ತಿ, ಆಭರಣದ ಜೊತೆಗೆ ಮ್ಯೂಚುಯಲ್ ಫಂಡ್ ಸಹ ಆಯ್ಕೆಯಾಗಿರಲಿ’ ಎಂದು ಸಲಹೆ ನೀಡಿದರು. </p>.<p>‘ಮ್ಯೂಚುಯಲ್ ಫಂಡ್ ವಲಯ ಪ್ರವೇಶಿಸುವಾಗ ಬ್ಯಾಂಕ್, ಹೂಡಿಕೆ ಪ್ರತಿನಿಧಿಗಳ ನೆರವು ಪಡೆಯಬಹುದು. ಕೇವಲ 5ರಿಂದ 7 ವರ್ಷಗಳಲ್ಲೇ ಹೂಡಿಕೆಗಿಂತ ದುಪ್ಪಟ್ಟು ಹಣ ಪಡೆಯಬಹುದು. ಈ ಕುರಿತ ಲೇಖನಗಳು ಹಾಗೂ ವಿಡಿಯೊಗಳನ್ನು ವೀಕ್ಷಿಸಿ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸಕ್ಯುರಿಟೀಸ್ ಮಾರ್ಕೆಟ್ (ಎನ್ಐಎಸ್ಎಂ) ಕೋರ್ಸ್ ಸಹ ಲಭ್ಯವಿದ್ದು, ಇದರಿಂದ ಅಗತ್ಯ ಜ್ಞಾನದೊಂದಿಗೆ ಉದ್ಯೋಗಕ್ಕೂ ನೆರವಾಗುತ್ತದೆ’ ಎಂದು ಹೇಳಿದರು.</p>.<p>ರೋಟರಿ ಹುಬ್ಬಳ್ಳಿ ಮಿಡ್ಟೌನ್ ಅಧ್ಯಕ್ಷ ಗುಲ್ಜಾರ್ ಎ.ಎಂ., ಕಾರ್ಯದರ್ಶಿ ವಿಶ್ವನಾಥ ಸಿ.ಅಂಗಡಿಕಿ , ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ರಾಹುಲ ಬೆಳಗಲಿ, ‘ಡೆಕ್ಕನ್ ಹೆರಾಲ್ಡ್’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ವೆಂಕಟರಾಜ್ ಕೆ.ಜಿ, ಜಾಹೀರಾತು ವಿಭಾಗದ ದಿವಾಕರ ಭಟ್, ಪ್ರಸರಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ ನಾಯಕ್ ಇದ್ದರು. </p>.<p><strong>‘ವಿಫುಲ ಯೋಜನೆ; ಹಲವು ಆಯ್ಕೆ’</strong> </p><p>‘ಮಾರುಕಟ್ಟೆಯಲ್ಲಿ ಏರಿಳಿತವಾದರೂ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೊಂದರೆಯಾಗದು. ಹೆಚ್ಚಿನ ತೊಂದರೆ ತೆಗೆದುಕೊಳ್ಳದೆ ಹಣ ಹೂಡಿಕೆ ಮಾಡಲು ಅವಕಾಶವಿದೆ. ಅಗತ್ಯವಿದ್ದಾಗ ಹೂಡಿಕೆ ಮಾಡಿದಷ್ಟು ಹಣ ಬಿಡಿಸಿಕೊಂಡರೂ ಅದಕ್ಕೆ ಸಂದಾಯವಾದ ಬಡ್ಡಿ ಬೆಳೆಯುತ್ತಿರುತ್ತದೆ’ ಎಂದು ಸದಾನಂದ ಪ್ಯಾಟಿ ತಿಳಿಸಿದರು. ‘ಜನರ ಆಸಕ್ತಿ ಸಮಯ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ವಿಧಾನಗಳಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುಯಲ್ ಫಂಡ್ನಲ್ಲಿ ಬಹಳ ಆಯ್ಕೆಗಳಿವೆ. ಒಂದು ದಿನದ ಯೋಜನೆಯೂ ಲಭ್ಯವಿದೆ. ಆದರೆ ಹೆಚ್ಚಿನ ಲಾಭ ಪಡೆಯಬೇಕಾದರೆ ದೀರ್ಘಾವಧಿ ಯೋಜನೆಗಳು ಉತ್ತಮ. ಈ ಬಗ್ಗೆ ಗೊಂದಲ ಬೇಡ ನಿಖರತೆ ಇರಲಿ. ತೆರಿಗೆ ಕಡಿತದ ಬಗ್ಗೆ ಜ್ಞಾನವೂ ಇರಬೇಕಾಗುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: ‘</strong>2047ರ ವೇಳೆಗೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಆಗಲಿದ್ದು, ದೇಶದ ಈ ಬೆಳೆವಣಿಗೆಯಲ್ಲಿ ಸಾರ್ವಜನಿಕರು ಸಹ ಭಾಗಿಯಾಗಲು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆಯಾಗಿದೆ’ ಎಂದು ಕೆನರಾ ರೊಬೆಕೊ–ಮ್ಯೂಚುಯಲ್ ಫಂಡ್ಸ್ ಸಂಸ್ಥೆಯ ವಲಯ ಮಾರಾಟ ವಿಭಾಗದ ಮುಖ್ಯಸ್ಥ ಸದಾನಂದ ಪ್ಯಾಟಿ ಹೇಳಿದರು.</p>.<p>ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ‘ಪ್ರಜಾವಾಣಿ’ ಸಹಯೋಗದಲ್ಲಿ ಕೆನರಾ ರೊಬೆಕೊ–ಮ್ಯೂಚುಯಲ್ ಫಂಡ್ಸ್ ಸಂಸ್ಥೆ ಹಾಗೂ ರೋಟರಿ ಹುಬ್ಬಳ್ಳಿ ಮಿಡ್ ಟೌನ್ ಶುಕ್ರವಾರ ಆಯೋಜಿಸಿದ್ದ ‘#ಸ್ಮಾರ್ಟ್ ಟುಮಾರೊ–ಹೂಡಿಕೆದಾರರ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು.</p>.<p>‘ದೇಶದ ಪ್ರಸ್ತುತ ಆರ್ಥಿಕತೆ 4.2 ಟ್ರಿಲಿಯನ್ ಡಾಲರ್ ಆಗಿದ್ದು, ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಜಿಡಿಪಿ ಶೇ 7.5ರಷ್ಟಿದೆ. ಜನರ ತಲಾದಾಯ ಸದ್ಯ ₹2 ಲಕ್ಷ ಇದ್ದು, 2047ರ ವೇಳೆಗೆ ₹16 ಲಕ್ಷಕ್ಕೂ ಅಧಿಕ ಆಗಲಿದೆ. ಜಿಎಸ್ಟಿ ಪರಿಷ್ಕರಣೆಯಿಂದ ಜನರಲ್ಲಿ ಹಣ ಉಳಿತಾಯವಾಗುತ್ತಿದೆ. ಹೂಡಿಕೆ ಮಾಡಲು ಇದು ಸದಾವಕಾಶ’ ಎಂದು ಅಭಿಪ್ರಾಯಪಟ್ಟರು. </p>.<p>‘ಜನರ ವೇತನ ಪ್ರಮಾಣ ಏರಿಕೆಯಾಗುತ್ತಿದ್ದು, ಇದರಲ್ಲಿ ಸಾಧ್ಯವಾದಷ್ಟು ಉಳಿಸಬೇಕು. ಉಳಿಕೆ ಹಣದಿಂದ ಉತ್ತಮ ಲಾಭ ಪಡೆಯಲು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿನ ಯೋಜನೆಗಳ ಮೂಲಕ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಬಡ್ಡಿ ಪಡೆದು, ಆ ಬಡ್ಡಿಯ ಮೇಲೆ ಇನ್ನಷ್ಟು ಬಡ್ಡಿ ಪಡೆಯುವ ಅವಕಾಶವಿದೆ’ ಎಂದು ವಿವರಿಸಿದರು. </p>.<p>‘ಬ್ಯಾಂಕ್ನಲ್ಲಿ ಹಣವಿಟ್ಟರೆ ಸಿಗುವ ಬಡ್ಡಿದರ ಕಡಿಮೆ. ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಲಾಭ ಪಡೆಯಲು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಎಲ್ಲ ರೀತಿಯಿಂದಲೂ ಉತ್ತಮವಾಗಿರುವ ಮ್ಯೂಚುಯಲ್ ಫಂಡ್ನತ್ತ ಅನೇಕ ಜನರು ಒಲವು ತೋರುತ್ತಿದ್ದಾರೆ’ ಎಂದರು.</p>.<p>‘ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕಾದರೆ ಆರ್ಥಿಕ ಶಿಸ್ತು ಪಾಲಿಸಬೇಕು. ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ಪರಿಣತರ ನೆರವು ಪಡೆಯಬೇಕು. ಯುವಜನರು ಈಗಲೇ ಹೂಡಿಕೆ ಮಾಡಿದರೆ ಕಂತುಗಳಲ್ಲಿ ಕಡಿಮೆ ಮೊತ್ತ ಪಾವತಿಸುತ್ತ, ತಾವು ಅಂದುಕೊಂಡಷ್ಟು ಮೊತ್ತವನ್ನು ನಿಗದಿತ ಸಮಯದಲ್ಲಿ ಗಳಿಸಬಹುದು’ ಎಂದು ವಿಶ್ಲೇಷಿಸಿದರು.</p>.<p>ನಂತರ ನಡೆದ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಒಂದೇ ಕಡೆಗೆ ಹೆಚ್ಚು ಹೂಡಿಕೆ ಮಾಡಬಾರದು. ಆಸ್ತಿ, ಆಭರಣದ ಜೊತೆಗೆ ಮ್ಯೂಚುಯಲ್ ಫಂಡ್ ಸಹ ಆಯ್ಕೆಯಾಗಿರಲಿ’ ಎಂದು ಸಲಹೆ ನೀಡಿದರು. </p>.<p>‘ಮ್ಯೂಚುಯಲ್ ಫಂಡ್ ವಲಯ ಪ್ರವೇಶಿಸುವಾಗ ಬ್ಯಾಂಕ್, ಹೂಡಿಕೆ ಪ್ರತಿನಿಧಿಗಳ ನೆರವು ಪಡೆಯಬಹುದು. ಕೇವಲ 5ರಿಂದ 7 ವರ್ಷಗಳಲ್ಲೇ ಹೂಡಿಕೆಗಿಂತ ದುಪ್ಪಟ್ಟು ಹಣ ಪಡೆಯಬಹುದು. ಈ ಕುರಿತ ಲೇಖನಗಳು ಹಾಗೂ ವಿಡಿಯೊಗಳನ್ನು ವೀಕ್ಷಿಸಿ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸಕ್ಯುರಿಟೀಸ್ ಮಾರ್ಕೆಟ್ (ಎನ್ಐಎಸ್ಎಂ) ಕೋರ್ಸ್ ಸಹ ಲಭ್ಯವಿದ್ದು, ಇದರಿಂದ ಅಗತ್ಯ ಜ್ಞಾನದೊಂದಿಗೆ ಉದ್ಯೋಗಕ್ಕೂ ನೆರವಾಗುತ್ತದೆ’ ಎಂದು ಹೇಳಿದರು.</p>.<p>ರೋಟರಿ ಹುಬ್ಬಳ್ಳಿ ಮಿಡ್ಟೌನ್ ಅಧ್ಯಕ್ಷ ಗುಲ್ಜಾರ್ ಎ.ಎಂ., ಕಾರ್ಯದರ್ಶಿ ವಿಶ್ವನಾಥ ಸಿ.ಅಂಗಡಿಕಿ , ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ರಾಹುಲ ಬೆಳಗಲಿ, ‘ಡೆಕ್ಕನ್ ಹೆರಾಲ್ಡ್’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ವೆಂಕಟರಾಜ್ ಕೆ.ಜಿ, ಜಾಹೀರಾತು ವಿಭಾಗದ ದಿವಾಕರ ಭಟ್, ಪ್ರಸರಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ ನಾಯಕ್ ಇದ್ದರು. </p>.<p><strong>‘ವಿಫುಲ ಯೋಜನೆ; ಹಲವು ಆಯ್ಕೆ’</strong> </p><p>‘ಮಾರುಕಟ್ಟೆಯಲ್ಲಿ ಏರಿಳಿತವಾದರೂ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೊಂದರೆಯಾಗದು. ಹೆಚ್ಚಿನ ತೊಂದರೆ ತೆಗೆದುಕೊಳ್ಳದೆ ಹಣ ಹೂಡಿಕೆ ಮಾಡಲು ಅವಕಾಶವಿದೆ. ಅಗತ್ಯವಿದ್ದಾಗ ಹೂಡಿಕೆ ಮಾಡಿದಷ್ಟು ಹಣ ಬಿಡಿಸಿಕೊಂಡರೂ ಅದಕ್ಕೆ ಸಂದಾಯವಾದ ಬಡ್ಡಿ ಬೆಳೆಯುತ್ತಿರುತ್ತದೆ’ ಎಂದು ಸದಾನಂದ ಪ್ಯಾಟಿ ತಿಳಿಸಿದರು. ‘ಜನರ ಆಸಕ್ತಿ ಸಮಯ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ವಿಧಾನಗಳಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುಯಲ್ ಫಂಡ್ನಲ್ಲಿ ಬಹಳ ಆಯ್ಕೆಗಳಿವೆ. ಒಂದು ದಿನದ ಯೋಜನೆಯೂ ಲಭ್ಯವಿದೆ. ಆದರೆ ಹೆಚ್ಚಿನ ಲಾಭ ಪಡೆಯಬೇಕಾದರೆ ದೀರ್ಘಾವಧಿ ಯೋಜನೆಗಳು ಉತ್ತಮ. ಈ ಬಗ್ಗೆ ಗೊಂದಲ ಬೇಡ ನಿಖರತೆ ಇರಲಿ. ತೆರಿಗೆ ಕಡಿತದ ಬಗ್ಗೆ ಜ್ಞಾನವೂ ಇರಬೇಕಾಗುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>