<p><em>ಅಬ್ದುಲರಝಾಕ ನದಾಫ್</em></p>.<p><strong>ನವಲಗುಂದ</strong>: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಗೊಂಡಿದ್ದು, ಕೃಷಿ ಭೂಮಿಗೆ ಬಹು ಬೇಡಿಕೆ ಬಂದಿದೆ. ಲಾವಣಿ, ಪಾಲು, ಬಡ್ಡಿ, ಕರಾರಿನ ಮೇಲೆ ಉಪಭೋಗಕ್ಕೆ ಕೊಡುವ ಕೃಷಿ ಜಮೀನಿನ ಬೆಲೆ ದುಪ್ಪಟ್ಟಾಗಿದೆ.</p>.<p>ಕೆಲ ವರ್ಷಗಳ ಹಿಂದೆ ಒಂದು ಎಕರೆ ಯರಿ (ಕಪ್ಪು) ಮಣ್ಣಿನ ಜಮೀನನ್ನು ಲಾವಣಿ ಪಡೆಯಲು ₹10 ಸಾವಿರದಿಂದ ₹15 ಸಾವಿರ ಕೊಟ್ಟರೆ ಹೆಚ್ಚು ಎನ್ನುವಂತಿತ್ತು. ಈಗ ಎಕರೆಗೆ ₹20 ಸಾವಿರದಿಂದ ₹30 ಸಾವಿರಕ್ಕೆ ದರ ಏರಿಕೆಯಾಗಿದೆ.</p>.<p>ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಭೂಮಿ ಹದಗೊಳಿಸಲು ರೈತರು ಮುಂದಾಗಿದ್ದಾರೆ. ಯುಗಾದಿಯಂದೇ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಮಾಗಿ ಮಳೆಗೆ ಉಳುಮೆ ಪ್ರಾರಂಭಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.</p>.<p>ಸದ್ಯ ಎಲ್ಲೆಡೆ ರೈತರು ಹೊಟ್ಟು–ಸೊಪ್ಪಿನ ಬಣವೆ ನಿರ್ಮಿಸುವುದು, ಜಮೀನಿಗೆ ಕೊಟ್ಟಿಗೆ ಗೊಬ್ಬರ ಹರಡುವುದು, ಟ್ರ್ಯಾಕ್ಟರ್ ಮೂಲಕ ರಂಟೆ–ಕುಂಟೆ ಹೊಡೆಯುವುದು, ಕಲ್ಲು, ಕಸ ಆರಿಸಿ ಸ್ವಚ್ಛಗೊಳಿಸುವುದು, ಬದು ನಿರ್ಮಾಣದಲ್ಲಿ ರೈತರು ತೊಡಗಿದ್ದಾರೆ.</p>.<p>ಟ್ರ್ಯಾಕ್ಟರ್ಗಳ ಬಾಡಿಗೆ ಏರಿಕೆ: ಹಿಂಗಾರಿನ ಕೃಷಿ ಚಟುವಟಿಕೆ ಮುಗಿಯುತ್ತಿದ್ದಂತೆಯೇ ರೈತರು ಎತ್ತುಗಳನ್ನು ಮಾರಿ, ಮತ್ತೆ ಮುಂಗಾರು ಪೂರ್ವದಲ್ಲಿ ಖರೀದಿಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಸದ್ಯ ಎತ್ತುಗಳ ದರ ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಎತ್ತು ಖರೀದಿಸುವಷ್ಟು ಸಾಮರ್ಥ್ಯ ಇಲ್ಲದ ರೈತರು ಟ್ರ್ಯಾಕ್ಟರ್ಗಳ ಮೊರೆ ಹೋಗಿದ್ದಾರೆ.</p>.<p>‘ಪ್ರತಿ ಎಕರೆಗೆ ಸಾಮಾನ್ಯ ರಂಟೆ ₹1,400, ಪಲ್ಟಿರಂಟಿ ₹2,500 ದಾಟಿದೆ. ಹರಗಲು ₹1,200, ದಿಂಡು ಹೊಡೆಯಲು ₹1,000 ದರವಿದೆ. ಆದರೆ ಡೀಸೆಲ್ ದರ ಹಾಗೂ ಚಾಲಕನ ಪಗಾರ ಹೆಚ್ಚಾಗಿದ್ದು, ಈ ದರಕ್ಕೆ ಬಾಡಿಗೆ ಹೊಡೆದರೆ ಲಾಭವಾಗುವುದಿಲ್ಲ’ ಎಂಬುದು ಟ್ರ್ಯಾಕ್ಟರ್ ಮಾಲೀಕರ ಅಳಲು.</p>.<div><blockquote>ಮುಂಗಾರಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಾಮಗ್ರಿಗಳನ್ನು ಬೇಡಿಕೆಯಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಪರಿಕರ ಮಾರಾಟಗಾರರು ಹಾಗೂ ರೈತರ ಸಭೆ ನಡೆಸಲಾಗಿದೆ </blockquote><span class="attribution">ರವೀಂದ್ರಗೌಡ ಪಾಟೀಲ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ನವಲಗುಂದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಅಬ್ದುಲರಝಾಕ ನದಾಫ್</em></p>.<p><strong>ನವಲಗುಂದ</strong>: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಗೊಂಡಿದ್ದು, ಕೃಷಿ ಭೂಮಿಗೆ ಬಹು ಬೇಡಿಕೆ ಬಂದಿದೆ. ಲಾವಣಿ, ಪಾಲು, ಬಡ್ಡಿ, ಕರಾರಿನ ಮೇಲೆ ಉಪಭೋಗಕ್ಕೆ ಕೊಡುವ ಕೃಷಿ ಜಮೀನಿನ ಬೆಲೆ ದುಪ್ಪಟ್ಟಾಗಿದೆ.</p>.<p>ಕೆಲ ವರ್ಷಗಳ ಹಿಂದೆ ಒಂದು ಎಕರೆ ಯರಿ (ಕಪ್ಪು) ಮಣ್ಣಿನ ಜಮೀನನ್ನು ಲಾವಣಿ ಪಡೆಯಲು ₹10 ಸಾವಿರದಿಂದ ₹15 ಸಾವಿರ ಕೊಟ್ಟರೆ ಹೆಚ್ಚು ಎನ್ನುವಂತಿತ್ತು. ಈಗ ಎಕರೆಗೆ ₹20 ಸಾವಿರದಿಂದ ₹30 ಸಾವಿರಕ್ಕೆ ದರ ಏರಿಕೆಯಾಗಿದೆ.</p>.<p>ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಭೂಮಿ ಹದಗೊಳಿಸಲು ರೈತರು ಮುಂದಾಗಿದ್ದಾರೆ. ಯುಗಾದಿಯಂದೇ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಮಾಗಿ ಮಳೆಗೆ ಉಳುಮೆ ಪ್ರಾರಂಭಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.</p>.<p>ಸದ್ಯ ಎಲ್ಲೆಡೆ ರೈತರು ಹೊಟ್ಟು–ಸೊಪ್ಪಿನ ಬಣವೆ ನಿರ್ಮಿಸುವುದು, ಜಮೀನಿಗೆ ಕೊಟ್ಟಿಗೆ ಗೊಬ್ಬರ ಹರಡುವುದು, ಟ್ರ್ಯಾಕ್ಟರ್ ಮೂಲಕ ರಂಟೆ–ಕುಂಟೆ ಹೊಡೆಯುವುದು, ಕಲ್ಲು, ಕಸ ಆರಿಸಿ ಸ್ವಚ್ಛಗೊಳಿಸುವುದು, ಬದು ನಿರ್ಮಾಣದಲ್ಲಿ ರೈತರು ತೊಡಗಿದ್ದಾರೆ.</p>.<p>ಟ್ರ್ಯಾಕ್ಟರ್ಗಳ ಬಾಡಿಗೆ ಏರಿಕೆ: ಹಿಂಗಾರಿನ ಕೃಷಿ ಚಟುವಟಿಕೆ ಮುಗಿಯುತ್ತಿದ್ದಂತೆಯೇ ರೈತರು ಎತ್ತುಗಳನ್ನು ಮಾರಿ, ಮತ್ತೆ ಮುಂಗಾರು ಪೂರ್ವದಲ್ಲಿ ಖರೀದಿಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಸದ್ಯ ಎತ್ತುಗಳ ದರ ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಎತ್ತು ಖರೀದಿಸುವಷ್ಟು ಸಾಮರ್ಥ್ಯ ಇಲ್ಲದ ರೈತರು ಟ್ರ್ಯಾಕ್ಟರ್ಗಳ ಮೊರೆ ಹೋಗಿದ್ದಾರೆ.</p>.<p>‘ಪ್ರತಿ ಎಕರೆಗೆ ಸಾಮಾನ್ಯ ರಂಟೆ ₹1,400, ಪಲ್ಟಿರಂಟಿ ₹2,500 ದಾಟಿದೆ. ಹರಗಲು ₹1,200, ದಿಂಡು ಹೊಡೆಯಲು ₹1,000 ದರವಿದೆ. ಆದರೆ ಡೀಸೆಲ್ ದರ ಹಾಗೂ ಚಾಲಕನ ಪಗಾರ ಹೆಚ್ಚಾಗಿದ್ದು, ಈ ದರಕ್ಕೆ ಬಾಡಿಗೆ ಹೊಡೆದರೆ ಲಾಭವಾಗುವುದಿಲ್ಲ’ ಎಂಬುದು ಟ್ರ್ಯಾಕ್ಟರ್ ಮಾಲೀಕರ ಅಳಲು.</p>.<div><blockquote>ಮುಂಗಾರಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಾಮಗ್ರಿಗಳನ್ನು ಬೇಡಿಕೆಯಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಪರಿಕರ ಮಾರಾಟಗಾರರು ಹಾಗೂ ರೈತರ ಸಭೆ ನಡೆಸಲಾಗಿದೆ </blockquote><span class="attribution">ರವೀಂದ್ರಗೌಡ ಪಾಟೀಲ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ನವಲಗುಂದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>