<p>ನವಲಗುಂದ: ಗೋವುಗಳ ಸುರಕ್ಷತೆಗೆ ಕಾನೂನು ರೂಪಿಸಬೇಕು ಹಾಗೂ ಗೋ ಪಾಲನಾ ಸಚಿವಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ನವಲಗುಂದ ಗೋ ಸಂತರು ಮತ್ತು ಭಕ್ತರು, ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಗಣೇಶ ಚಳ್ಳಕೆರೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.</p>.<p>‘ಗೋ ಪಾಲನೆ ಕೇವಲ ಶ್ರದ್ಧೆಯ ವಿಷಯವಲ್ಲ; ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಆಗಿದೆ. ಗೋ ಸಂರಕ್ಷಣೆಗೆ ಕಾಯ್ದೆ ಜಾರಿಗೊಳಿಸಬೇಕು. ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಯಬೇಕು’ ಎಂದು ಒತ್ತಾಯಿಸಿದರು.</p>.<p>ಗುರುನಗೌಡ ನರೇಂದ್ರ, ಸುಭಾಸ್ ತಡಹಾಳ, ರವಿಕುಮಾರ್ ಬಾರಕೇರ, ಮಲ್ಲಿಕಾರ್ಜುನ ಕುಂಬಾರ, ಈರಣ್ಣ ಪೂಜಾರ, ಮಣಿಕಂಠ ದೊಡ್ಡಮ್ಮನವರ, ಮಲ್ಲಪ್ಪ ಗಾಣಿಗೇರ, ನಾಗೇಶಗೌಡ ಮುದಿಗೌಡರ, ಮಂಜುನಾಥ ಕೋಟಿ, ಕಲ್ಲಪ್ಪ ಭುಜಂಗಣ್ಣವರ, ಬಸನಗೌಡ ಮರೀಗೌಡ್ರ, ದೇವರಾಜಪ್ಪ ಹಿರೇಮಠ ಇದ್ದರು.</p>.<p>ಕುಂದಗೋಳ ವರದಿ: ‘ಗೋವಿಗೆ ರಾಷ್ಟ್ರ ಮಾತೆಯ ಸ್ಥಾನ ನೀಡಬೇಕು’ ಎಂಧುದು ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಹೇಳಿದರು.</p>.<p>ಗೋಮಾತೆ ಗೌರವ ಅಭಿಯಾನ ಅಂಗವಾಗಿ ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಸಂಪೂರ್ಣ ಜಾರಿಯಾಗಬೇಕೆಂದು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.</p>.<p>‘ಗೋವುಗಳ ರಕ್ಷಣೆಗೆ ಹೋರಾಡುತ್ತಿರುವವರ ಜೊತೆ ನಾವಿದ್ದೇವೆ’ ಎಂದರು.</p>.<p>ಪಟ್ಟಣದ ಗಾಳಿಮರೆಮ್ಮ ದೇವಸ್ಥಾನ ಹತ್ತಿರ ಹಿರೇಮಠದ ಶಿತಿಕಂಠೇಶ್ವರ ಸ್ವಾಮೀಜಿ, ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಗೋಮಾತೆಗೆ ಪೂಜೆ ಸಲ್ಲಿಸಿದರು.ತಹಶೀಲ್ದಾರ್ ಕಚೇರಿಗೆ ಆಗಮಿಸಿ ಶಿರಸ್ತೇದಾರ್ ಶಾನಬಾಗ ಅವರಿಗೆ ಮನವಿ ಸಲ್ಲಿಸಿದರು.</p>.<p>ಶ್ರೀರಾಮ ಸೇನೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದಿವಟಗಿ, ವಿಶ್ವಾಸ ನಾಗಶೆಟ್ಟಿ, ವಿಜಯ ಗೂಡಲಮನಿ, ಗಣೇಶ ಕೋಕಾಟೆ, ಸಿದ್ದು ಧಾರವಾಡಶೆಟ್ರ, ಹರಿಷ ಕೊನೇರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-24-1310040397</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವಲಗುಂದ: ಗೋವುಗಳ ಸುರಕ್ಷತೆಗೆ ಕಾನೂನು ರೂಪಿಸಬೇಕು ಹಾಗೂ ಗೋ ಪಾಲನಾ ಸಚಿವಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ನವಲಗುಂದ ಗೋ ಸಂತರು ಮತ್ತು ಭಕ್ತರು, ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಗಣೇಶ ಚಳ್ಳಕೆರೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.</p>.<p>‘ಗೋ ಪಾಲನೆ ಕೇವಲ ಶ್ರದ್ಧೆಯ ವಿಷಯವಲ್ಲ; ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಆಗಿದೆ. ಗೋ ಸಂರಕ್ಷಣೆಗೆ ಕಾಯ್ದೆ ಜಾರಿಗೊಳಿಸಬೇಕು. ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಯಬೇಕು’ ಎಂದು ಒತ್ತಾಯಿಸಿದರು.</p>.<p>ಗುರುನಗೌಡ ನರೇಂದ್ರ, ಸುಭಾಸ್ ತಡಹಾಳ, ರವಿಕುಮಾರ್ ಬಾರಕೇರ, ಮಲ್ಲಿಕಾರ್ಜುನ ಕುಂಬಾರ, ಈರಣ್ಣ ಪೂಜಾರ, ಮಣಿಕಂಠ ದೊಡ್ಡಮ್ಮನವರ, ಮಲ್ಲಪ್ಪ ಗಾಣಿಗೇರ, ನಾಗೇಶಗೌಡ ಮುದಿಗೌಡರ, ಮಂಜುನಾಥ ಕೋಟಿ, ಕಲ್ಲಪ್ಪ ಭುಜಂಗಣ್ಣವರ, ಬಸನಗೌಡ ಮರೀಗೌಡ್ರ, ದೇವರಾಜಪ್ಪ ಹಿರೇಮಠ ಇದ್ದರು.</p>.<p>ಕುಂದಗೋಳ ವರದಿ: ‘ಗೋವಿಗೆ ರಾಷ್ಟ್ರ ಮಾತೆಯ ಸ್ಥಾನ ನೀಡಬೇಕು’ ಎಂಧುದು ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಹೇಳಿದರು.</p>.<p>ಗೋಮಾತೆ ಗೌರವ ಅಭಿಯಾನ ಅಂಗವಾಗಿ ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಸಂಪೂರ್ಣ ಜಾರಿಯಾಗಬೇಕೆಂದು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.</p>.<p>‘ಗೋವುಗಳ ರಕ್ಷಣೆಗೆ ಹೋರಾಡುತ್ತಿರುವವರ ಜೊತೆ ನಾವಿದ್ದೇವೆ’ ಎಂದರು.</p>.<p>ಪಟ್ಟಣದ ಗಾಳಿಮರೆಮ್ಮ ದೇವಸ್ಥಾನ ಹತ್ತಿರ ಹಿರೇಮಠದ ಶಿತಿಕಂಠೇಶ್ವರ ಸ್ವಾಮೀಜಿ, ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಗೋಮಾತೆಗೆ ಪೂಜೆ ಸಲ್ಲಿಸಿದರು.ತಹಶೀಲ್ದಾರ್ ಕಚೇರಿಗೆ ಆಗಮಿಸಿ ಶಿರಸ್ತೇದಾರ್ ಶಾನಬಾಗ ಅವರಿಗೆ ಮನವಿ ಸಲ್ಲಿಸಿದರು.</p>.<p>ಶ್ರೀರಾಮ ಸೇನೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದಿವಟಗಿ, ವಿಶ್ವಾಸ ನಾಗಶೆಟ್ಟಿ, ವಿಜಯ ಗೂಡಲಮನಿ, ಗಣೇಶ ಕೋಕಾಟೆ, ಸಿದ್ದು ಧಾರವಾಡಶೆಟ್ರ, ಹರಿಷ ಕೊನೇರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-24-1310040397</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>