<p>ನವಲಗುಂದ: ’ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಸೇವಾನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಿರಲಿ ಎಂದು ಶಿಕ್ಷಕಿ ಎಸ್.ಡಿ.ದೊಡ್ಡಬಸನಗೌಡ್ರ ಹೇಳಿದರು.</p>.<p>ತಾಲ್ಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲೆ ಶಿಕ್ಷಕ ಎಸ್.ಜಿ.ಗೊಣಸಂಗಿ ಬೀಳ್ಕೊಡುಗೆ ಹಾಗೂ ಅವರ ಸೇವಾ ನಿವೃತ್ತಿ ಸಮಾರಂಭ ಉದ್ದೇಶಿಸಿ ಮಾತನಾಡಿದರು.</p>.<p>ಯುವ ಮುಖಂಡ ಫಕ್ಕೀರೇಶ ಪಡೆಸೂರ ಮಾತನಾಡಿ, ‘ಶಿಕ್ಷಕ ಎಸ್.ಜಿ.ಗೊಣಸಂಗಿ ಅವರ ಸೇವೆ ನಮ್ಮ ಶಾಲೆಗೆ ಅಪಾರ. ಅವರು ಹೇಳಿ ಕೊಟ್ಟ ಪಾಠ ಮಕ್ಕಳಲ್ಲಿ ಅಚ್ಚ ಅಳಿಯದೆ ಉಳಿದಿವೆ. ಅವರು ಈ ಶಾಲೆಯಿಂದ ಅಷ್ಟೆ ನಿವೃತ್ತಿ ಹೊಂದಿರಬಹುದು, ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಮನಸ್ಸಿಂದ ಅಲ್ಲ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ’ ಎಂದರು.</p>.<p>ಪ್ರಧಾನ ಗುರುಗಳಾದ ಎಚ್.ಡಿ.ಜಿಡ್ಡಿಮನಿ, ವಿ.ಎನ್.ಲಿಂಗರಡ್ಡಿ, ಎಸ್.ಎಂ.ತಳವಾರ, ವಿರೇಶ್ ಗುಳೆದ, ಕಲ್ಮೇಶ ಹೂಗಾರ, ಮುತ್ತು ಜಂಗಣ್ಣವರ, ಕುಮಾರ ಹಡಪದ, ನಾಗಲಿಂಗಪ್ಪ ಉಳ್ಳೆಗಡ್ಡಿ ಸೇರಿದಂತೆ ಎಸ್ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-24-1038405354</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವಲಗುಂದ: ’ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಸೇವಾನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಿರಲಿ ಎಂದು ಶಿಕ್ಷಕಿ ಎಸ್.ಡಿ.ದೊಡ್ಡಬಸನಗೌಡ್ರ ಹೇಳಿದರು.</p>.<p>ತಾಲ್ಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲೆ ಶಿಕ್ಷಕ ಎಸ್.ಜಿ.ಗೊಣಸಂಗಿ ಬೀಳ್ಕೊಡುಗೆ ಹಾಗೂ ಅವರ ಸೇವಾ ನಿವೃತ್ತಿ ಸಮಾರಂಭ ಉದ್ದೇಶಿಸಿ ಮಾತನಾಡಿದರು.</p>.<p>ಯುವ ಮುಖಂಡ ಫಕ್ಕೀರೇಶ ಪಡೆಸೂರ ಮಾತನಾಡಿ, ‘ಶಿಕ್ಷಕ ಎಸ್.ಜಿ.ಗೊಣಸಂಗಿ ಅವರ ಸೇವೆ ನಮ್ಮ ಶಾಲೆಗೆ ಅಪಾರ. ಅವರು ಹೇಳಿ ಕೊಟ್ಟ ಪಾಠ ಮಕ್ಕಳಲ್ಲಿ ಅಚ್ಚ ಅಳಿಯದೆ ಉಳಿದಿವೆ. ಅವರು ಈ ಶಾಲೆಯಿಂದ ಅಷ್ಟೆ ನಿವೃತ್ತಿ ಹೊಂದಿರಬಹುದು, ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಮನಸ್ಸಿಂದ ಅಲ್ಲ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ’ ಎಂದರು.</p>.<p>ಪ್ರಧಾನ ಗುರುಗಳಾದ ಎಚ್.ಡಿ.ಜಿಡ್ಡಿಮನಿ, ವಿ.ಎನ್.ಲಿಂಗರಡ್ಡಿ, ಎಸ್.ಎಂ.ತಳವಾರ, ವಿರೇಶ್ ಗುಳೆದ, ಕಲ್ಮೇಶ ಹೂಗಾರ, ಮುತ್ತು ಜಂಗಣ್ಣವರ, ಕುಮಾರ ಹಡಪದ, ನಾಗಲಿಂಗಪ್ಪ ಉಳ್ಳೆಗಡ್ಡಿ ಸೇರಿದಂತೆ ಎಸ್ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-24-1038405354</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>