ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ಸುರಿದ ಸತತ ಮಳೆಗೆ ಬಹಳಷ್ಟು ಕೆರೆಗಳು ಕೋಡಿ ಹರಿದಿವೆ.
ಹುಬ್ಬಳ್ಳಿ ಹಾಗೂ ಕುಂದಗೋಳಕ್ಕೆ ನೀರು ಪೂರೈಸುವ ಕಲಘಟಗಿ ತಾಲ್ಲೂಕಿನ ನೀರಸಾಗರ ಉಕ್ಕಿ ಹರಿದಿದೆ. 38 ಅಡಿ ಎತ್ತರದ ಕೆರೆ ಬಹಳ ವರ್ಷಗಳ ನಂತರ ಸತತ ಎರಡನೇ ಬಾರಿ ಭರ್ತಿಯಾಗಿದೆ. ಅಳನಾವರ ತಾಲ್ಲೂಕಿನ ಹೂಲಿ ಕೆರೆಯೂ ಭರ್ತಿಯಾಗಿದೆ.
ಕಳೆದಬಾರಿ ಸುರಿದ ಭಾರಿ ಮಳೆಗೆ ತುಂಬಿದ್ದ ಕೆರೆ ಒಡೆಯುವ ಭೀತಿ ಸೃಷ್ಟಿಸಿತ್ತು. ಈ ಬಾರಿಯೂ ಕೆರೆ ತುಂಬಿ ಉಕ್ಕಿ ಹರಿಯುತ್ತಿದೆ. ಸತತ ಮಳೆಗೆ ಬಹಳಷ್ಟು ಕೆರೆಗಳು ಕೊಡಿಹರಿಯುತ್ತಿವೆ.