ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದ ಎಂ.ಸಿ.ಚೆಟ್ಟಿ ನಿಧನ

Last Updated 19 ಸೆಪ್ಟೆಂಬರ್ 2019, 19:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹಿರಿಯ ಭಾವಚಿತ್ರಕಲಾವಿದ ಎಂ.ಸಿ. ಚೆಟ್ಟಿ (62)ಗುರುವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ ನಗರದ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.

ಧಾರವಾಡ, ಗದಗ, ವಿಜಯಪುರ, ಬೆಳಗಾವಿ, ಬೆಂಗಳೂರು, ಗೋವಾದಲ್ಲಿ ಅವರು ಚಿತ್ರಕಲಾ ಪ್ರದರ್ಶನ ಮಾಡಿದ್ದರು. 1982 ಮತ್ತು 1986ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಹುಬ್ಬಳ್ಳಿಯ ಜಾಗೃತಿ ಕಲಾವಿದರು ಸಂಸ್ಥೆಯ ಸಂಸ್ಥಾಪಕ
ಕಾರ್ಯದರ್ಶಿಯಾಗಿದ್ದರು.

1994 ಮತ್ತು 1997ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕಲಾಮೇಳದಲ್ಲಿ ಪಾಲ್ಗೊಂಡಿದ್ದರು. ಹಲವಾರು ಕಲಾಕೃತಿಗಳು ಲಲಿತಕಲಾ ಅಕಾಡೆಮಿ ಸಂಗ್ರಹದಲ್ಲಿವೆ. ಅಂತ್ಯಕ್ರಿಯೆ ಶುಕ್ರವಾರ (ಸೆ. 20) ಬೆಳಿಗ್ಗೆ ನಡೆಯಲಿದೆ. ಸಂಪರ್ಕಕ್ಕೆ 95387 17082.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT