‘53ನೇ ವಾರ್ಡ್ ವ್ಯಾಪ್ತಿಯ ಮೇದಾರ ಓಣಿಯಲ್ಲಿ ಪಾಲಿಕೆ ವತಿಯಿಂದ ನಿತ್ಯವೂ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಆದರೂ, ಕೆಲವರು ರಾತ್ರಿ ಹೊತ್ತು ನಾಲೆಗೆ ಕಸ ತಂದು ಚೆಲ್ಲುತ್ತಾರೆ. ಹಾಗಾಗಿ, ಅದರಲ್ಲಿ ತ್ಯಾಜ್ಯ ತುಂಬಿಕೊಳ್ಳುತ್ತದೆ. ದಿನಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಗಮನಿಸಿ ನಾಲೆ ಸ್ವಚ್ಛಗೊಳಿಸಲಾಗಿದೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.