ನವನಗರದ ರಾಚಪ್ಪ ಅವಾರಿ ಅವರು ಪುತ್ರನ ವಿವಾಹವನ್ನು 2021ರ ಮೇ 23ರಂದು ನಡೆಸುವ ಸಲುವಾಗಿ ಕೆಪಿಟಿಸಿಎಲ್ ನೌಕರರ ಸಭಾಭವನ ಕಾಯ್ದಿರಿಸಿದ್ದರು. ಕರಾರಿನಂತೆ ಮುಂಗಡವಾಗಿ ₹1.18 ಲಕ್ಷ ನೀಡಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಭಾಭವನದಲ್ಲಿ ಮದುವೆ ಸಮಾರಂಭವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಹೀಗಾಗಿ ಮದುವೆ ನಡೆದಿರಲಿಲ್ಲ. ಹಣ ಮರಳಿಸುವಂತೆ ರಾಚಪ್ಪ ಯೂನಿಯನ್ಗೆ ವಿನಂತಿಸಿದಾಗ, ₹88,500 ಮರಳಿಸಿ ₹29,500 ಇಟ್ಟುಕೊಂಡಿದ್ದರು. ರಾಚಪ್ಪ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ವಿಚಾರಣೆಗೆ ಯೂನಿಯನ್ ಹಾಜರಾಗಿರಲಿಲ್ಲ. ಪರಿಣಾಮ ಪ್ರಕರಣ ಕುರಿತು ಯೂನಿಯನ್ ಯಾವುದೇ ತಕರಾರು ಹೊಂದಿಲ್ಲ ಎಂದು ಪರಿಗಣಿಸಿ ತೀರ್ಪು ನೀಡಿದೆ.