ಹುಬ್ಬಳ್ಳಿ: ಸುಜಲಾನ್ ಗ್ಲೋಬಲ್ ಸರ್ವಿಸಸ್ ಸಂಸ್ಥೆ ಬಾಕಿ ಉಳಿಸಿಕೊಂಡಿದ್ದ 113 ಕಾರ್ಮಿಕರ 10 ತಿಂಗಳ ವೇತನವನ್ನು ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರು ಸಂಸ್ಥೆಯಿಂದ ವಸೂಲಿ ಮಾಡಿ ಕಾರ್ಮಿಕರಿಗೆ ಚೆಕ್ ಮೂಲಕ ಪಾವತಿಸಿದರು.
ಬಾಕಿ ವೇತನ ₹1,33,31,640 ಪಾವತಿಸದ ಬಗ್ಗೆ ಕಾರ್ಮಿಕ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು. ಜೂನ್ 26ರಂದು ಹುಬ್ಬಳ್ಳಿ ಉಪ ಕಾರ್ಮಿಕ ಕಚೇರಿಗೆ ಬಂದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರು ಕಾರ್ಮಿಕರಿಗೆ ವೇತನದ ಚೆಕ್ಗಳನ್ನು ಹಸ್ತಾಂತರಿಸಿದರು. ಕಾರ್ಮಿಕರು ಉಪ ಆಯುಕ್ತರನ್ನು ಸನ್ಮಾನಿಸಿದರು.