ಗಣಪತಿಯನ್ನು ಕೂಡಿಸಲು ಬಳಸಿದ್ದ ಕಟ್ಟಿಗೆಯ ಮಣೆ, ಹೂವಿನ ಹಾರ, ಕಾಯಿಕಟ್ಟಿದ ಬಟ್ಟೆ, ಪೂಜಾ ಸಾಮಗ್ರಿಗಳು ತುಂಬಿದ ಪ್ಲಾಸ್ಟಿಕ್ ಚೀಲಗಳು ನೀರಿನಲ್ಲಿ ತೇಲಾಡುತ್ತಿವೆ. ಇದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸರಳವಾಗಿ ನಡೆದ ಗಣೇಶೋತ್ಸವಕ್ಕೂ ಇಷ್ಟೊಂದು ಪ್ಲಾಸ್ಟಿಕ್ಗಳೇ ತುಂಬಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.