ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನೆ: ದಲಿತ ಮುಖಂಡರ ಬಂಧನ

Last Updated 10 ಮಾರ್ಚ್ 2018, 9:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ದಲಿತ‌ ಸಂಘಟನೆಗಳ‌‌ ಪ್ರಮುಖರನ್ನು ಇಲ್ಲಿ ಬಂಧಿಸಲಾಯಿತು.

ಪಿತಾಂಬ್ರಪ್ಪ ಬಿಳಾರ, ಪ್ರೇಮನಾಥ ಚಿಕ್ಕತುಂಬಳ, ವಿಜಯ ‌ಗುಂಟ್ರಾಳ, ಗುರುನಾಥ ಉಳ್ಳಿಕಾಶಿ, ಪರಶುರಾಮ ಕಾಳೆ ಅವರನ್ನು ಬಂಧಿಸಿ‌ ಕರೆದೊಯ್ಯಲಾಯಿತು.

ಸಚಿವ ಅನಂತಕುಮಾರ್ ಹೆಗಡೆ  ಸಂವಿಧಾನ ವಿರೋಧಿ ಹೇಳಿಕೆ‌ ನೀಡಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಸಚಿವರು ‌ವಿದ್ಯಾನಗರದ‌ ದೈವಜ್ಞ ಭವನಕ್ಕೆ ಕಾರ್ಯಕ್ರಮ ‌ನಿಮಿತ್ತ ಭೇಟಿ‌ ನೀಡುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT