ಭವಾನಿ ನಗರದಲ್ಲಿರುವ ನಂಜನಗೂಡಿನ ರಾಯರ ಮಠ, ಪರಿಮಳ ಮಾರ್ಗದ ಮಠ, ಕುಬೇರಪುರಂ, ನವನಗರದ ಮಠ, ಶ್ರೀಕೃಷ್ಣ ಕಲ್ಯಾಣ ಮಂಟಪದ ಮಠ ಮತ್ತು ತೊರವಿಗಲ್ಲಿ ಹೀಗೆ ನಗರದಲ್ಲಿ ಹತ್ತಕ್ಕೂ ಹೆಚ್ಚು ರಾಯರ ಮಠಗಳಿವೆ. ಪ್ರತಿ ವರ್ಷ ಭವಾನಿ ನಗರದ ಮಠವೊಂದರಲ್ಲಿಯೇ ಸಾವಿರಾರು ಜನ ದರ್ಶನಕ್ಕೆ ಹಾಗೂ ಪ್ರಸಾದ ಸ್ವೀಕರಿಸಲು ಬರುತ್ತಿದ್ದರು. ಈ ವರ್ಷ ತೀರ್ಥ ಹಾಗೂ ಅನ್ನ ಸಂತರ್ಪಣೆ ರದ್ದು ಮಾಡಲಾಗಿದೆ.