‘ಶಿಕ್ಷಕರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆಯಂತಹ ಅಗತ್ಯ ಸೌಲಭ್ಯಗಳನ್ನು ನೀಡದ ಬಹುತೇಕ ಶಿಕ್ಷಣ ಸಂಸ್ಥೆಗಳು ತೆರಿಗೆ ಹಾಗೂ ಸೌಲಭ್ಯ ನೀಡುವಿಕೆಯಿಂದ ತಪ್ಪಿಸಿಕೊಳ್ಳಲು ಬಿಇಒ ಕಚೇರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಈಗ ಪರಿಹಾರಕ್ಕಾಗಿ ಶಿಕ್ಷಕರ ನಿಖರ ಮಾಹಿತಿ ನೀಡಿದಲ್ಲಿ, ತಮ್ಮ ಅಸಲಿಯತ್ತು ಬಯಲಾಗುವುದೋ ಎಂಬ ಆತಂಕ ಸಂಸ್ಥೆಗಳಿಗಿದೆ. ಅಗತ್ಯ ಸೌಲಭ್ಯಕ್ಕಾಗಿ ಶಿಕ್ಷಕರು ಆಗ್ರಹಿಸಿದಲ್ಲಿ, ಈ ಸಂಸ್ಥೆಗಳು ಅನಿವಾರ್ಯವಾಗಿ ನೀಡಬೇಕಾಗುತ್ತದೆ. ಕಾನೂನು ಹೋರಾಟಕ್ಕೂ ಶಿಕ್ಷಕರಿಗೆ ದಾಖಲೆಗಳು ಸಿಕ್ಕಂತಾಗುತ್ತದೆ. ಇದನ್ನೆಲ್ಲ ಯೋಚಿಸಿ, ನಿಖರ ಮಾಹಿತಿಯನ್ನು ನೀಡದ ಸಾಧ್ಯತೆ ಇರುವುದರಿಂದ ಅರ್ಹ ಶಿಕ್ಷಕರಿಗೆ ಪರಿಹಾರ ಸಿಗುವುದು ಅನುಮಾನವಾಗಿದೆ’ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ಸಂಸ್ಥಾಪಕ ಅಧ್ಯಕ್ಷ ಸಿ.ಎನ್. ನಾಗೇಶ್ ತಿಳಿಸಿದರು.