<p><strong>ಧಾರವಾಡ</strong>: ಕನ್ನಡ ಜನಪದ ಲೋಕಕ್ಕೆ ಬಿ.ಎಸ್.ಗದ್ದಗಿಮಠ ಕೊಡುಗೆ ಅಪಾರ ಎಂದು ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು. </p><p>ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶುಕ್ರವಾರ ನಡೆದ ಬಿ.ಎಸ್.ಗದ್ದಗಿಮಠ ದತ್ತಿ ಕಾರ್ಯಕ್ರಮದಲ್ಲಿ ಬಿ.ಎಸ್.ಗದ್ದಗಿಮಠ `ಕನ್ನಡ ಜಾನಪದ ತಜ್ಞ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಗದ್ದಗಿಮಠ ಅವರು ಯಾವುದೇ ಅಪೇಕ್ಷೆಯೂ ಇಲ್ಲದೆ, ರಸ್ತೆ ಸಾರಿಗೆ ಸೌಕರ್ಯಗಳೇ ಇಲ್ಲದ ಕಾಲದಲ್ಲಿ ಹಳ್ಳಿಗಳು ಸುತ್ತಾಡಿ ಜನಪದ ಸಂಗ್ರಹಿಸಿದ್ದು ಅದ್ಭುತ. ಗದ್ದಗಿಮಠರ ಹೆಸರಿನ ಪ್ರಶಸ್ತಿಯು ಘನತೆ ತಂದುಕೊಟ್ಟಿದೆ ಎಂದರು.</p>.<p>ನಿವೃತ್ತ ಪ್ರಾಧ್ಯಾಪಕ ಪಿ.ಕೆ.ಖಂಡೋಬಾ ಅವರು ಮಾತನಾಡಿ, ‘ಸ್ವಾತಂತ್ರ್ಯಪೂರ್ವದಲ್ಲಿ ಅಲಸಂಗಿ ಗೆಳೆಯರ ಬಳಗ ಹಾಗೂ ಸ್ವಾತಂತ್ರ್ಯ ನಂತರ ಬಿ.ಎಸ್.ಗದ್ದಗಿಮಠ ಅವರು ಜನಪದ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಶಿಗ್ಗಾವಿಯ ಜಾನಪದ ವಿಶ್ವವಿದ್ಯಾಲಯಕ್ಕೆ <br /> ಗದ್ದಗಿಮಠ ಅವರ ಹೆಸರ ನಾಮಕರಣ ಮಾಡಬೇಕು. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಅವರ ಪ್ರತಿಮೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದರು.</p>.<p>‘ಮೂರು ವರ್ಷಗಳಿಗೊಮ್ಮೆ ಜನಪದ ಸಮ್ಮೇಳನ ನಡೆಸಬೇಕು. ಗದ್ದಗಿಮಠ ಅವರ ಸಾಕ್ಷ್ಯಚಿತ್ರ ತಯಾರಿಸಿ ಗ್ರಾಮೀಣ ಭಾಗದಲ್ಲಿ ಭಿತ್ತರಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಜನಪದ ಕಲಾವಿದರಿಗೆ ಉತ್ತೇಜನ ನೀಡಬೇಕು’ ಎಂದರು.</p>.<p>ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿ.ವಿ ಕುಲಪತಿ ಪ್ರೊ.ಎ.ಎಂ.ಖಾನ್, ದತ್ತಿ ದಾನಿಗಳಾದ ಪುಲಕೇಶಿ ಗದ್ದಗಿಮಠ, ನಿಜಗುಣಿ ಗದ್ದಗಿಮಠ, ಉಷಾ ಗದ್ದಗಿಮಠ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಕನ್ನಡ ಜನಪದ ಲೋಕಕ್ಕೆ ಬಿ.ಎಸ್.ಗದ್ದಗಿಮಠ ಕೊಡುಗೆ ಅಪಾರ ಎಂದು ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು. </p><p>ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶುಕ್ರವಾರ ನಡೆದ ಬಿ.ಎಸ್.ಗದ್ದಗಿಮಠ ದತ್ತಿ ಕಾರ್ಯಕ್ರಮದಲ್ಲಿ ಬಿ.ಎಸ್.ಗದ್ದಗಿಮಠ `ಕನ್ನಡ ಜಾನಪದ ತಜ್ಞ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಗದ್ದಗಿಮಠ ಅವರು ಯಾವುದೇ ಅಪೇಕ್ಷೆಯೂ ಇಲ್ಲದೆ, ರಸ್ತೆ ಸಾರಿಗೆ ಸೌಕರ್ಯಗಳೇ ಇಲ್ಲದ ಕಾಲದಲ್ಲಿ ಹಳ್ಳಿಗಳು ಸುತ್ತಾಡಿ ಜನಪದ ಸಂಗ್ರಹಿಸಿದ್ದು ಅದ್ಭುತ. ಗದ್ದಗಿಮಠರ ಹೆಸರಿನ ಪ್ರಶಸ್ತಿಯು ಘನತೆ ತಂದುಕೊಟ್ಟಿದೆ ಎಂದರು.</p>.<p>ನಿವೃತ್ತ ಪ್ರಾಧ್ಯಾಪಕ ಪಿ.ಕೆ.ಖಂಡೋಬಾ ಅವರು ಮಾತನಾಡಿ, ‘ಸ್ವಾತಂತ್ರ್ಯಪೂರ್ವದಲ್ಲಿ ಅಲಸಂಗಿ ಗೆಳೆಯರ ಬಳಗ ಹಾಗೂ ಸ್ವಾತಂತ್ರ್ಯ ನಂತರ ಬಿ.ಎಸ್.ಗದ್ದಗಿಮಠ ಅವರು ಜನಪದ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಶಿಗ್ಗಾವಿಯ ಜಾನಪದ ವಿಶ್ವವಿದ್ಯಾಲಯಕ್ಕೆ <br /> ಗದ್ದಗಿಮಠ ಅವರ ಹೆಸರ ನಾಮಕರಣ ಮಾಡಬೇಕು. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಅವರ ಪ್ರತಿಮೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದರು.</p>.<p>‘ಮೂರು ವರ್ಷಗಳಿಗೊಮ್ಮೆ ಜನಪದ ಸಮ್ಮೇಳನ ನಡೆಸಬೇಕು. ಗದ್ದಗಿಮಠ ಅವರ ಸಾಕ್ಷ್ಯಚಿತ್ರ ತಯಾರಿಸಿ ಗ್ರಾಮೀಣ ಭಾಗದಲ್ಲಿ ಭಿತ್ತರಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಜನಪದ ಕಲಾವಿದರಿಗೆ ಉತ್ತೇಜನ ನೀಡಬೇಕು’ ಎಂದರು.</p>.<p>ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿ.ವಿ ಕುಲಪತಿ ಪ್ರೊ.ಎ.ಎಂ.ಖಾನ್, ದತ್ತಿ ದಾನಿಗಳಾದ ಪುಲಕೇಶಿ ಗದ್ದಗಿಮಠ, ನಿಜಗುಣಿ ಗದ್ದಗಿಮಠ, ಉಷಾ ಗದ್ದಗಿಮಠ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>