‘ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಲಂಕೇಶ್, ಬಸವರಾಜ ಕಟ್ಟೀಮನಿ, ರಹಮತ್ ತರೀಕೆರೆ, ವೈದೇಹಿ, ಶಶಿ ತರೀಕೆರೆ ಅವರ ‘ಡುಮಿಂಗ’, ಶಾಂತಿ ಕೆ.ಅಪ್ಪಣ್ಣ ಅವರ ‘ಮೂರು ಚಿಲ್ಲರೆ’, ಕಿರೇಸೂರ ಗಿರಿಯಪ್ಪ ಅವರ ‘ಗಜಲ್’ ಶರಣಬಸಪ್ಪ ಗುಡದಿನ್ನಿ ಅವರ ಕತೆ ಸೇರಿದಂತೆ ಅನೇಕ ಕೃತಿಗಳು ಅವಲೋಕನಗೊಂಡಿವೆ. ಪಾಶ್ಚಾತ್ಯ ಸಾಹಿತ್ಯ ಕೃತಿಗಳ ಮಹತ್ವವನ್ನು ಹಲವರು ತಿಳಿಸಿದ್ದಾರೆ’ ಎಂದು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ತಿಳಿಸಿದರು.