‘ಮಠದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು. ಜಯ–ವಿಜಯ ಭಜನಾ ಮಂಡಳಿಯವರು ರಾಯರ ಸುಳಾದಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ 6ರಿಂದ 7ರವರೆಗೆ ಕಾಂಚನ ಹಳ್ಯಾಳ ಅವರು ದಾಸವಾಣಿ ಮತ್ತು 7.15ರಿಂದ 8ರವರೆಗೆ ಅನುಷಾ ಮುತಾಲಿಕ ದೇಸಾಯಿ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ಮಠದ ವ್ಯವಸ್ಥಾಪಕ ಜೆ. ವೇಣುಗೋಪಾಲ ತಿಳಿಸಿದರು.