ಪಂಡಿತ್ ಅಶೋಕ ನಾಡಿಗೇರ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ನಡೆಯಲಿದೆ. ರಾಘವೇಂದ್ರ ನಾಕೋಡ್, ಮನುಕುಮಾರ್ ಹಿರೇಮಠ (ತಬಲಾ), ವಿಜಯಕುಮಾರ ಅರ್ಕಸಾಲಿ (ಸಂವಾದಿನಿ), ಈಶ್ವರಪ್ಪ (ತಾಳ ವಾದ್ಯ) ಜೊತೆಯಾಗಲಿದ್ದಾರೆ. ರಾಣೆಬೆನ್ನೂರಿನ ಭಾರತೀಯ ಸಂಗೀತ ವಿದ್ಯಾಲಯದ ಅಧ್ಯಕ್ಷ ಶ್ರೀಪಾದರಾವ್ ಕುಲಕರ್ಣಿ ಅವರಿಗೆ ಸನ್ಮಾನ ನಡೆಯಲಿದೆ. ಸಿದ್ಧಾರೂಢ ಮಠದ ಟ್ರಸ್ಟಿ ಶ್ಯಾಮಾನಂದ ಪೂಜೇರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗೋವಿಂದ ಆಚಾರ್ಯ ತಿಳಿಸಿದ್ದಾರೆ.