ಸಂಜೆ 4ರಿಂದ 5.30ರ ತನಕ ಸುರಿದ ಜೋರು ಮಳೆಗೆ ಹೊಸೂರು ವೃತ್ತ, ಕೋಯಿನ್ ರಸ್ತೆ, ದಾಜಿಬಾನ್ ಪೇಟೆ ಮುಖ್ಯ ರಸ್ತೆಯಲ್ಲಿ ನೀರು ನಿಂತಿತ್ತು. ವಿದ್ಯಾನಗರ, ಉಣಕಲ್, ಜೆಸಿ ನಗರ ಹಾಗೂ ಇತರೆಡೆ ಮಕ್ಕಳು ಮಳೆಯಲ್ಲಿ ನೆನೆದು ಸಂಭ್ರಮ ಪಟ್ಟರು. ಕಿಮ್ಸ್ ಎದುರಿನ ಬಿಆರ್ಟಿಎಸ್ ನಿಲ್ದಾಣದ ಸಮೀಪ ಬಸ್ಸು ವೇಗವಾಗಿ ಹೋಗಿದ್ದರಿಂದ ಸಿಡಿದ ನೀರಿಗೆ ಮಕ್ಕಳು ಖುಷಿ ಪಟ್ಟರು.