ಹುಬ್ಬಳ್ಳಿ: ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ಮೋಡಕವಿದ ಹಾಗೂ ತಣ್ಣನೆಯ ವಾತಾವರಣವಿದ್ದು, ಗುರುವಾರ ಬೆಳಿಗ್ಗೆಯಿಂದ ಜಿಟಿ, ಜಿಟಿ ಮಳೆ ಆರಂಭವಾಗಿದೆ.
ಇದರಿಂದಾಗಿ ಹಾಲು ಹಾಕುವವರು ಹಾಗೂ ಪತ್ರಿಕೆ ಹಂಚುವ ಹುಡುಗರು ತಮ್ಮ ನಿತ್ಯದ ಕಾಯಕವನ್ನು ಮಳೆಯಲ್ಲೇ ಮಾಡಬೇಕಾಯಿತು.
ಬೆಳಿಗ್ಗೆ 6.45ರಿಂದ 9 ಗಂಟೆ ತನಕ:ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕಿತ್ತು. ಇದಕ್ಕಾಗಿ ಅವರು ಬುಧವಾರ ರಾತ್ರಿಯೇ ಹುಬ್ಬಳ್ಳಿಗೆ ಬಂದು ಹೋಟೆಲ್ ನಲ್ಲಿ ತಂಗಿದ್ದರು. ಮಳೆಯ ಕಾರಣ ಪರಿಶೀಲನೆಯನ್ನು ಮುಂದೂಡಲಾಯಿತು.