ಬುಧವಾರ ಸಂಜೆ ಉಣಕಲ್ ಕೆರೆ ಕೋಡಿ ಬಿದ್ದ ಕಾರಣ ಜನ ಕೋಡಿ ಬಿದ್ದ ಕಟ್ಟೆಯ ಮೇಲೆ ನಿಂತು ಫೋಟೊ ತೆಗೆದುಕೊಳ್ಳುತ್ತಿದ್ದ ಚಿತ್ರಣ ಕಂಡುಬಂತು. ಈ ಕೆರೆ ಹೋದ ವರ್ಷವೂ ಕೋಡಿ ಬಿದ್ದಿದ್ದರಿಂದ ಲಿಂಗರಾಜ ನಗರ, ದೇವಿ ನಗರ, ಬನಶಂಕರಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿತ್ತು. ಈ ಬಾರಿ ಅನಾಹುತ ಮರುಕಳಿಸಬಾರದೆಂದು ಪಾಲಿಕೆ ಒಂದೂವರೆ ತಿಂಗಳ ಮೊದಲೇ ನಾಲಾಗಳನ್ನು ಸ್ವಚ್ಛಗೊಳಿಸಿದೆ.