ಮಳೆಯಿಂದ ರಸ್ತೆಯ ತಗ್ಗು-ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ಜನ ಪರದಾಡಿದರು. ಧಾರವಾಡದ ನೆಹರೂ ನಗರ, ಮಾಳಮಡ್ಡಿ, ಲಕ್ಷ್ಮಿಸಿಂಗನಕೇರಿ ರಸ್ತೆಯಲ್ಲಿ ಗುಂಡಿಗಳು ನೀರಿನಿಂದ ತುಂಬಿಕೊಂಡ ಪರಿಣಾಮ ವಾಹನ ಸವಾರರು ಪರದಾಡಿದರು. ಕಿಮ್ಸ್ ಮುಂಭಾಗ ಸೇರಿದಂತೆ ಹಲವೆಡೆ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಮಳೆ ನೀರು ನಿಂತಿತ್ತು.