ಬೆಂಡಲಗಟ್ಟಿ ಗ್ರಾಮದ ಆಸ್ತಾನಾರಕಟ್ಟಿ ಕೆರೆ ಕಟ್ಟೆ ಒಡೆದು ಸೋಯಾಬಿನ್, ಗೋವಿನ ಜೋಳ ಹಾಗೂ ಭತ್ತದ ಬೆಳೆ ನೀರು ಪಾಲಾಗಿದೆ. ತಾವರಗೇರಿ ಗ್ರಾಮದ ಹೊನ್ನಿಹಳ್ಳಿ ಕೆರೆ ಕಟ್ಟೆ ಒಡೆದು ಬಾಳೆ ತೋಟ, ಸೋಯಾಬಿನ್, ಗೋವಿನ ಜೋಳ, ಭತ್ತ, ಕಬ್ಬು ಬೆಳೆಗಳಿಗೆ ನೀರು ನುಗ್ಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಸಂಗಮೇಶ್ವರ ಗ್ರಾಮದ ಹತ್ತಿರದ ಮಂಗ್ಯಾನ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕಲಘಟಗಿ-ಹಳಿಯಾಳ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕ ಕಡಿತವಾಗಿದೆ.