‘ಸಮುದ್ರ ಪ್ರದೇಶ, ನದಿ, ಅರಣ್ಯಗಳೆಲ್ಲಾ ನಗರೀಕರಣಕ್ಕೆ ಬಲಿಯಾಗುತ್ತಿವೆ. ಇದರಿಂದ ಜನಸಾಮಾನ್ಯರ ಸಾಂಪ್ರದಾಯಿಕ ಹಕ್ಕುಗಳಿಗೆ ಚ್ಯುತಿ ಬಂದಿದೆ. ಪಶ್ಚಿಮ ಘಟ್ಟದ ಪರಿಸರ ನಾಶ, ಬುಡಕಟ್ಟು ಜನರ ಹಕ್ಕುಗಳಿಗೆ ತಡೆ ಇದಕ್ಕೆ ಉದಾಹರಣೆಯಾಗಿದೆ. ನಗರೀಕರಣದಿಂದ ಸಾಮಾನ್ಯ ಆಸ್ತಿಗಳು ನಶಿಸಿಹೋಗುತ್ತಿವೆ. ಇದರೊಂದಿಗೆ ಹಕ್ಕುಗಳಿಗೆ ಕುಂದು ಉಂಟಾಗುತ್ತಿವೆ. ಸಾಮಾನ್ಯರ ಆಸ್ತಿ ಹಾಗೂ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮಾನ್ಯ ಆಸ್ತಿಗಳ ನಾಶ ಆದಾಗ ನಮ್ಮ ನಾಶ ಆದಂತೆ. ಇವುಗಳನ್ನು ಅರಿತುಕೊಂಡು ಸದ್ಭಳಕೆ ಮಾಡಬೇಕು’ ಎಂದು ಹೇಳಿದರು.