ಶಿಬಿರದ ನಿರ್ದೇಶಕರಾಗಿ ಹುಬ್ಬಳ್ಳಿಯ ಆರ್.ಬಿ. ಗರಗ, ಧಾರವಾಡದ ಡಿ.ಎಂ. ಬಡಿಗೇರ, ಎಫ್.ವಿ. ಚಿಕ್ಕಮಠ ಕಾರ್ಯನಿರ್ವಹಿಸಲಿದ್ದಾರೆ. ಕಲಾವಿದರಾದ ಹುಬ್ಬಳ್ಳಿಯ ಶಕುಂತಲಾ ವೆರ್ಣೇಕರ, ಕಿರಣ ಶೇರಖಾನೆ, ಧಾರವಾಡದ ಶಿವಕುಮಾರ ಕಂಕಣವಾಡಿ, ಸವಿತಾ ಪಾಟೀಲ, ದೀಪಕ ಬಿ., ಬಸವರಾಜ ಕಲೆಗಾರ ಹಾಗೂ ಯುವಕಲಾವಿದರಾದ ಧಾರವಾಡದ ಧನರಾಜ ನಾಯ್ಕ, ಗಝಲ್ ಕಾಮತ್, ವಿವೇಕಾನಂದ ಬಡಿಗೇರ, ನಿಂಗಪ್ಪ ದೊಡ್ಡಸುಂಕದ, ಹುಬ್ಬಳ್ಳಿಯ ಸುಮಂತ ಹೆಗಡೆ, ಶ್ರೀಲಕ್ಷ್ಮಿ ಬೆಳವಟಗಿ, ವಿಜಯ ಧೋಂಗಡಿ, ಗಣೇಶ ಸಾಬೋಜಿ, ಸುಮಾ ಶೇಠ್ ಭಾಗವಹಿಸಲಿದ್ದಾರೆ.