‘ಇತ್ತೀಚಿನ ವರ್ಷಗಳಲ್ಲಿ ಸಂವಾದಗಳು ಕಡಿಮೆಯಾಗುತ್ತಿವೆ. ಈಗಿನ ಯುವಕರಲ್ಲಿ ಬರೆಯುವ ಆಸಕ್ತಿ ಸಾಕಷ್ಟಿದೆ. ಆದರೆ, ಆಳವಾದ ಅಧ್ಯಯನವಿಲ್ಲದ ಕಾರಣ ಬರವಣಿಗೆ ಗಟ್ಟಿಯಾಗಿಲ್ಲ. ಕಮ್ಮಟದಲ್ಲಿ ಕನ್ನಡ ಸಾಹಿತ್ಯ ಪರಂಪರೆ ಕುರಿತು ಚಂದ್ರಶೇಖರ ವಸ್ತ್ರದ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಸಾಹಿತಿ ಪ್ರೇಮಶೇಖರ ಅವರು ಕಥಾ ರಚನೆಯ ಸಂದರ್ಭದ ವಸ್ತು, ನಿರೂಪಣಾ ತಂತ್ರ, ಅಧ್ಯಯನ, ಪ್ರವಾಸ, ಅನುಭವಗಳ ಮೂಲಕ ಬರೆಯುವ ಕಥೆಗಳಿಗೆ ಬೇಕಾದ ತಯಾರಿ ಮತ್ತು ಶಿಸ್ತಿನ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ’ ಎಂದು ಸುಬ್ರಮಣ್ಯ ಹೇಳಿದರು. ವೇದಿಕೆಯ ಅಧ್ಯಕ್ಷ ಎನ್.ಬಿ. ರಾಮಾಪುರ ಇದ್ದರು.