ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಪಾಲಿಕೆ ವ್ಯಾಪ್ತಿಯ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿ ಕಚೇರಿಗಳು ಹಾಗೂ ವಿರೋಧ ಪಕ್ಷದ ನಾಯಕರ ಕಚೇರಿಗಳ ನವೀಕರಣದ ವೆಚ್ಚ ನೀಡುವಂತೆ ಹಾಗೂ ಬಿಲ್ ಬಿಡುಗಡೆಗೆ ಮುನ್ನ ಅಧಿಕಾರಿಗಳ ಸಮಿತಿ ರಚನೆ ಮಾಡುವಂತೆ ಪಾಲಿಕೆ ಸದಸ್ಯ ಮಹ್ಮದ ಇಸ್ಮಾಯಿಲ್ ಭದ್ರಾಪುರ ಆಗ್ರಹಿಸಿದ್ದಾರೆ.