ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಮೊರಾರ್ಜಿ ನಗರದ 2ನೇ ಹಂತದಲ್ಲಿರುವ ಐದು ಉಪ ರಸ್ತೆಗಳ ಡಾಂಬರೀಕರಣ ಮಾಡಬೇಕು ಎಂದು ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಹಾನಗರ ಪಾಲಿಕೆ ಸದಸ್ಯ (ವಾರ್ಡ್ ಸಂಖ್ಯೆ 32) ಸತೀಶ ಹಾನಗಲ್ಲ ಅವರಿಗೆ ಮನವಿ ಸಲ್ಲಿಸಿದರು.
ಮೊರಾರ್ಜಿ ನಗರದ ಉದ್ಯಾನದಲ್ಲಿ ತಗಡಿನ ಶೆಡ್ ಇದೆ. ಸಂಘದ ಸದಸ್ಯರು ಸಭೆ ಸೇರಲು ಅನುಕೂಲವಾಗುವಂತೆ ಕೊಠಡಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ನಾಗರಾಜ ನಾಡಕರ್ಣಿ, ಗೌರವಾಧ್ಯಕ್ಷ ಹನಮಂತಪ್ಪ ಇಂಗಳಹಳ್ಳಿ, ಖಜಾಂಚಿ ಮಾಧವ ಕುಲಕರ್ಣಿ, ಅಶೋಕ ಮಜ್ಜಿಗುಡ್ಡ, ರವಿ ಅರ್ಕಸಾಲಿ, ಪ್ರಕಾಶ ಹೊಸಮನಿ ಇದ್ದರು.