ಪಾಲಿಕೆ ವತಿಯಿಂದ ಅನುಮತಿ ಪಡೆದಿರುವ ಕಾಶಪ್ಪ ಬಿಜವಾಡ ಅವರು ರೈಲ್ವೆ ನಿಲ್ದಾಣ, ಚನ್ನಮ್ಮ ವೃತ್ತದಲ್ಲಿ ದನಗಳನ್ನು ಸೆರೆಹಿಡಿದರು. ಕಾಶಪ್ಪ ದಿನಕ್ಕೆ ಹತ್ತು ಬಿಡಾಡಿ ದನಗಳನ್ನು ಸೆರೆ ಹಿಡಿದು ಅದರಗುಂಚಿಯಲ್ಲಿರುವ ಗೋ ಶಾಲೆಯಲ್ಲಿ ರಕ್ಷಣೆ ಮಾಡುತ್ತಿದ್ದಾರೆ. ಅವುಗಳ ಮಾಲೀಕರು ಬಂದರೆ ಪ್ರತಿ ದನಕ್ಕೆ ₹ 4,000 ಪಡೆದು ಬಿಡುಗಡೆ ಮಾಡುತ್ತಾರೆ.