ಹುಬ್ಬಳ್ಳಿ: ಮಳೆ ಅಬ್ಬರಕ್ಕೆ ಗುಂಡಿ ಬಿದ್ದು ಹದಗೆಟ್ಟಿದ್ದ ಅವಳಿನಗರದ ರಸ್ತೆಗಳ ದುರಸ್ತಿ ಕೆಲಸವನ್ನು ಪಾಲಿಕೆಯು ಸೋಮವಾರದಿಂದ ಆರಂಭಿಸಿದೆ. ಚನ್ನಮ್ಮ ವೃತ್ತದ ಆಸುಪಾಸಿನ ರಸ್ತೆಗಳಾದ ನೀಲಿಜನ್ ರಸ್ತೆ, ಕೋರ್ಟ್ ವೃತ್ತ, ಗ್ಲಾಸ್ ಹೌಸ್, ಈಜುಕೋಳ ರಸ್ತೆ, ಉಣಕಲ್ ಸೇರಿದಂತೆ ವಿವಿಧೆಡೆ ಗುಂಡಿಗಳನ್ನು ಸಿಮೆಂಟ್ ಕಾಂಕ್ರೀಟ್ನಿಂದ ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ.