ಮಳೆ ಸ್ವಲ್ಪ ವಿರಾಮ ನೀಡಿರುವ ಕಾರಣ ಪಾಲಿಕೆ ಅಧಿಕಾರಿಗಳು ಈ ಬಡಾವಣೆಯಲ್ಲಿ ಕೆಸರು ರಸ್ತೆ ಸರಿಪಡಿಸುವ ಕೆಲಸ ಆರಂಭಿಸಿದ್ದಾರೆ. ಗುಂಡಿ ಬಿದ್ದ ಜಾಗದಲ್ಲಿ ಬೆಣಚು ಕಲ್ಲುಗಳನ್ನು ಹಾಕುತ್ತಿದ್ದ ಚಿತ್ರಣ ಮಂಗಳವಾರ ಕಂಡುಬಂತು. ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಹೋಗಿದ್ದ ಅಲ್ಲಿಯ ಜನ ಫೇಸ್ಬುಕ್ ಅಭಿಯಾನ ಕೂಡ ಆರಂಭಿಸಿದ್ದರು.ಇದರ ಬಗ್ಗೆ ಮಂಗಳವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.