‘ನೈರುತ್ಯ ರೈಲ್ವೆಯು ಕರ್ನಾಟಕದ ಹಾವೇರಿ, ಮದ್ದೂರು, ಧಾರವಾಡ, ವಿದುರಾಶ್ವತ್ಥ ರೈಲು ನಿಲ್ದಾಣಗಳನ್ನು ಹಾಗೂ ಮೈಸೂರು–ಕೆಎಸ್ಆರ್ ಬೆಂಗಳೂರು– ಮೈಸೂರು ಟಿಪ್ಪು ಎಕ್ಸ್ಪ್ರೆಸ್, ಕೆಎಸ್ಆರ್ ಬೆಂಗಳೂರು– ಮೀರಜ್– ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲುಗಳನ್ನು ಆಯ್ಕೆ ಮಾಡಿದೆ. ಇಲ್ಲಿ ವಿಶೇಷ ದೀಪಾಲಂಕಾರ, ಸ್ಪಾಟ್ ಲೈಟ್, ಸೆಲ್ಫಿ ಸ್ಟ್ಯಾಂಡ್, ಡಿಜಿಟಲ್ ಪರದೆಗಳ ಅವಳವಡಿಕೆ, ದೇಶಭಕ್ತಿ ಗೀತೆಗಳ ಗಾಯನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ಹೇಳಿದರು.