ಹುಬ್ಬಳ್ಳಿ: ‘ಸಹಜ ಯೋಗ ಸಂಸ್ಥೆಯಿಂದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 31ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠ ಕ್ಯಾಂಪಸ್ನ ಮಹಾತ್ಮ ಗಾಂಧಿ ಪ್ರಾರ್ಥನಾ ಮಂದಿರದಲ್ಲಿ ಮತ್ತು ಸಂಜೆ 5ಕ್ಕೆ ವಿಜಯನಗರ ಸಿಟಿ ಹೈಸ್ಕೂಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ಸಂಸ್ಥೆಯ ಡಾ. ಪುಷ್ಪಾ ಪಿ. ಹೇಳಿದರು.
‘ಆಗಸ್ಟ್ 2ರಂದು ಧಾರವಾಡದ ಶಿವಾಜಿ ಸರ್ಕಲ್ ಬಳಿಯ ಭಾರತ ಹೈಸ್ಕೂಲ್ನ ಶತಾಬ್ಧಿ ಭವನದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಈ ಸ್ಥಳದಲ್ಲಿ ಪ್ರತಿ ಭಾನುವಾರ ಸಂಜೆ 5ಕ್ಕೆ ಸಾಮೂಹಿಕ ಧ್ಯಾನ ಜರುಗಲಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹುಬ್ಬಳ್ಳಿಯ ವಿದ್ಯಾಪೀಠ ಕ್ಯಾಂಪಸ್ನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 10.30ಕ್ಕೆ ಮತ್ತು ವಿಜಯನಗರದ ಗೋಲ್ಡನ್ ಪಾರ್ಕ್ನ ಸಮುದಾಯ ಭವನದಲ್ಲಿಸಂಜೆ 5ಕ್ಕೆ ಉಚಿತವಾಗಿ ಸಾಮೂಹಿಕ ಧ್ಯಾನ ಕಾರ್ಯಕ್ರಮವು ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದು. ಆಸಕ್ತರು ಮೊ: 78291 38131 ಮತ್ತು 96206 12510 ಸಂಪರ್ಕಿಸಬಹುದು’ ಎಂದರು.
‘ಆತ್ಮ ಸಾಕ್ಷಾತ್ಕಾರದ ಅಂಗವಾಗಿ ಸಂಸ್ಥೆಯಿಂದ ರಾಜ್ಯದಲ್ಲಿ ಚೈತನ್ಯ ರಥಯಾತ್ರೆ ಆರಂಭವಾಗಿದೆ. ಜುಲೈ 31ಕ್ಕೆ ಹುಬ್ಬಳ್ಳಿಗೆ ಬರಲಿರುವ ರಥಯಾತ್ರೆಯನ್ನು ದೇಶಪಾಂಡೆ ನಗರದ ಗರ್ಲ್ಸ್ ಹೈಸ್ಕೂಲ್ನಲ್ಲಿ ಸ್ವಾಗತಿಸಿ, ಮೆರವಣಿಗೆ ಮೂಲಕ ವಿದ್ಯಾಪೀಠಕ್ಕೆ ಕರೆತರಲಾಗುವುದು’ ಎಂದು ಹೇಳಿದರು.
ಸಂಸ್ಥೆಯ ಶಿವು ನಂದಿಗೇರಿ, ಹಿಂದೂ ನಂದಿಗೇರಿ, ಮಧು ಮಠದ, ಅಪರ್ಣಾ ಅರಕೇರಿ ಹಾಗೂ ಸೌಂದರ್ಯ ಮಠದ ಇದ್ದರು.