ಧಾರವಾಡ: ‘ಬಿಜೆಪಿಯವರು 10 ವರ್ಷಗಳಲ್ಲಿ ದೇಶದಲ್ಲಿ 2,500 ಶಾಸಕರನ್ನು ಖರೀದಿಸಿದ್ದಾರೆ. ಅವರು ಹಣದ ಆಮಿಷವೊಡ್ಡುವುದು ಹೊಸದಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಹಣದ ಆಮಿಷವೊಡ್ಡಿರುವ ಬಗ್ಗೆ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಹಣದ ಪಾರ್ಟಿ. ಬಿಜೆಪಿ ನಿಧಿ ₹7,500 ಕೋಟಿ ಇದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕೋವಿಡ್ ವೇಳೆ, ಪ್ರಧಾನಮಂತ್ರಿ ಪರಿಹಾರ ನಿಧಿಯಲ್ಲಿ ₹30 ಸಾವಿರ ಕೋಟಿ ಸಂಗ್ರಹವಾಗಿದೆ. ಆ ಹಣದಲ್ಲಿ ಈವರೆಗೆ ಒಂದೇ ಒಂದು ಆಸ್ಪತ್ರೆ ನಿರ್ಮಾಣವಾಗಿಲ್ಲ’ ಎಂದರು.
‘ಸತೀಶ ಜಾರಕಿಹೊಳಿ ಅವರನ್ನು 30 ವರ್ಷಗಳಿಂದ ಬಲ್ಲೆ. ಅವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಲ್ಲ. ಅವರು ಅಸಮಾಧಾನ ಬೇರೆ ರೀತಿ ತೋಡಿಕೊಂಡಿದ್ಧಾರೆ, ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ’ ಎಂದರು.
‘ಬರಗಾಲ ಆವರಿಸಿರುವ ಇಂದಿನ ಸಂದರ್ಭದಲ್ಲಿ ಬ್ಯಾಂಕ್ಗಳು ಸಾಲ ಮರುಪಾವತಿಗೆ ರೈತರಿಗೆ ಒತ್ತಡ ಹೇರಬಾರದು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ರೈತರು ಸಾಲ ಪಾವತಿಸದಿದ್ದರೆ ಸರ್ಕಾರವು ಮನ್ನಾ ಮಾಡಬೇಕು. ಅದಕ್ಕೆ, ಮಾನದಂಡ ನಿಗದಿಪಡಿಸಬೇಕು. ಉದಾರವಾಗಿ ಯೋಚಿಸಬೇಕು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ’ ಎಂದರು.
ತಾತಾ ತಾಯಿ ಮತ್ತು ತಂದೆ ಬಗ್ಗೆ ಬಿಜೆಪಿಯವರು ಎಷ್ಟೇ ಹೀಯಾಳಿಸಿದರೂ ರಾಹುಲ್ ಗಾಂಧಿ ಏನೂ ಮಾಡಲಿಲ್ಲ. ಗೌತಮ ಬುದ್ಧನ ರೀತಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆಸಂತೋಷ ಲಾಡ್ ಕಾರ್ಮಿಕ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.