‘ವಿಚಾರ ಸಂಕಿರಣದಲ್ಲಿ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ನಾ. ದಿವಾಕರ್, ಡಾ. ಸಿದ್ಧನಗೌಡ ಪಾಟೀಲ, ಪ್ರೊ. ಕೇಶವ ಶರ್ಮಾ, ಡಾ. ಸಬಿತಾ ಬನ್ನಾಡಿ, ಡಾ. ಗುರುಪಾದ ಬರಿಗುದ್ದಿ, ಹೃಷಕೇಶ್ ಬಹಾದ್ದೂರ ದೇಸಾಯಿ ಅವರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಸಂಸ್ಕೃತಿ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅವರು ಆಶಯ ಭಾಷಣ ಮಾಡಲಿದ್ದಾರೆ. ಯುವ ಸಂಶೋಧಕರಿಗಾಗಿ ಪ್ರತ್ಯೇಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ‘ ಎಂದು ಹೇಳಿದರು.