ಬೆಳಿಗ್ಗೆ 8ಕ್ಕೆ ಅಭಿಷೇಕ, 9ಕ್ಕೆ ನೀಲಕಂಠೇಶ್ವರ ಸ್ವಾಮಿ ಭಾವಚಿತ್ರ ಹಾಗೂ ಆಂಜನೇಯ ಮೂರ್ತಿ ಮೆರವಣಿಗೆ, 10.30ಕ್ಕೆ ಮೂರ್ತಿ ಪ್ರತಿಷ್ಠಾಪನೆ ಹಾಗೂ 11ಕ್ಕೆ ಧರ್ಮಸಭೆ ನಡೆಯಲಿದೆ. ಬೆಟಗೇರಿ–ಗದಗ ನೀಲಕಂಠ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಹನುಮಂತಪ್ಪ ಧೂಪದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.