ಧಾರವಾಡ: ರಾಜ್ಯ ಕಾನೂನು ವಿಶ್ವವಿದ್ಯಾಲಯದ 5ನೇ ಘಟಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದಿ. ನ್ಯಾ. ಮೋಹನ ಶಾಂತನಗೌಡರ ಅವರಿಗೆ ಗೌರವ ಡಾಕ್ಟರೇಟ್ (ಮರಣೋತ್ತರ) ಪ್ರದಾನ ಮಾಡಿದರು.
ಸುನೀತಾ ಎಂ. ಶಾಂತನಗೌಡರ ಪದವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು ಭಾವುಕರಾದರು.
ಘಟಕೋತ್ಸವದಲ್ಲಿ ಒಟ್ಟು 5189 ವಿದ್ಯಾರ್ಥಿಗಳಿಗೆ ಕಾನೂನು ವಿಷಯದ ವಿವಿಧ ಪದವಿಗಳನ್ನು ಪ್ರದಾನ ಮಾಡಿದರು.