ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಶಿವಕುಮಾರ್ ದೇಶಬಿಟ್ಟು ಓಡಿ ಹೋಗಲು ತಯಾರಿ ನಡೆಸಿರಲಿಲ್ಲ. ಅವರು ಮಹಾತ್ವಾಕಾಂಕ್ಷಿ ರಾಜಕಾರಣಿಯಾಗಿದ್ದು, ಎಷ್ಟೇ ಕಷ್ಟ ಎದುರಾದರೂ ದಿಟ್ಟತನದಿಂದ ಎದುರಿಸುವ ಛಾತಿ ಇದೆ. ದೇಶದ ಅಭಿವೃದ್ಧಿಗಾಗಿ ಕಾನೂನುಗಳನ್ನು ಬಳಸುವುದನ್ನು ಬಿಟ್ಟು, ಎದುರಾಳಿ ಪಕ್ಷದವರನ್ನು ವೈರಿಯಂತೆ ನೋಡಲು ಬಳಸಲಾಗುತ್ತಿದೆ. ಷಡ್ಯಂತ್ರದ ಮೂಲಕ ಅವರ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.