ಕಲಘಟಗಿ: ತಾಲ್ಲೂಕಿನ ಸೋಮನಕೊಪ್ಪ ಗ್ರಾಮದ ಹತ್ತಿರದ ದ್ಯಾಮಣ್ಣ ಗುಡಿಹಾಳ ಅವರ ಜಮೀನಿನಲ್ಲಿ ಶಾರ್ಟ್ ಸರ್ಕೀಟ್ನಿಂದ ಕಬ್ಬಿನ ಲಾರಿಯೊಂದು ಸುಟ್ಟು ಕರಕಲಾಗಿದೆ.
ಲಾರಿ ಸ್ಟಾರ್ಟ್ ಮಾಡುವಾಗ ಬೆಂಕಿಯ ಕಿಡಿ ಕೆಳಗೆ ಸಿಡಿದು ಕಬ್ಬಿನ ಒಣಗಿದ ಹುಲ್ಲಿಗೆ ತಗುಲಿ ಬೆಂಕಿ ಲಾರಿಗೂ ಆವರಿಸಿಕೊಂಡಿದೆ. ಬೆಂಕಿ ಕ್ಷಣ ಮಾತ್ರದಲ್ಲಿ ಸಂಪೂರ್ಣ ವ್ಯಾಪಿಸಿ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಲಾರಿ ಹತ್ತಿರವಿದ್ದ ರೈತ ಮಹಿಳೆ ಗಂಗವ್ವ ಕೂಲಿ ಅವರ ಮೂರು ಎಕರೆ ಕಬ್ಬಿಗೂ ತಗುಲಿ ಕಬ್ಬು ಸುಟ್ಟು ಕರಕಲಾಗಿದೆ. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.